26.1 C
Sidlaghatta
Tuesday, March 19, 2024

ವೃದ್ಧಾಪ್ಯ – ಆರೋಗ್ಯ

- Advertisement -
- Advertisement -

ಮಾನವನ ಜೀವನದ ಪ್ರಮುಖವಾದ ಹಂತಗಳೆಂದರೆ ಜನನ, ಬಾಲ್ಯ, ಹರಯ (ಯೌವನ), ವೃದ್ಧಾಪ್ಯ ಹಾಗೂ ಮರಣ. ಜೀವನದ ಪ್ರತಿಯೊಂದು ಹಂತದಲ್ಲೂ ಮನುಷ್ಯನಲ್ಲಿ ಶಾರೀರಿಕವಾಗಿ ಹಾಗೂ ಮಾನಸಿಕವಾಗಿ ಅನೇಕ ಮಾರ್ಪಾಟುಗಳಾಗುತ್ತವೆ. ಈ ಪರಿವರ್ತನೆಗಳಿಗೆ ತಕ್ಕಂತೆ ನಮ್ಮ ಆಹಾರ ಸೇವನಾ ವಿಧಾನ ಹಾಗೂ ನಮ್ಮ ದೈನಂದಿನ ಚಟುವಟಿಕೆಗಳನ್ನೂ ಬದಲಾಯಿಸಿಕೊಳ್ಳಬೇಕು. ಇದರಿಂದ ಆರೋಗ್ಯ ರಕ್ಷಣೆಯೂ ಆಗುತ್ತದೆ. ಆಯಾ ಜೀವನದ ಹಂತಗಳಿಗೆ ಅನುಸಾರವಾಗಿ ಮನುಷ್ಯನು ಸರಿಯಾಗಿ ವಿಕಾಸ ಹೊಂದುತ್ತಾನೆ.
ಮುಪ್ಪಿನ ಹಂತದಲ್ಲಿ ಶರೀರದ ಎಲ್ಲಾ ಭಾಗಗಳಲ್ಲೂ ಸವೆಕಳಿ ಉಂಟಾಗುತ್ತದೆ. ದೃಷ್ಟಿ ಮಂದವಾಗುತ್ತದೆ. ಶ್ರವಣ ಶಕ್ತಿಯು ಕುಂಠಿತಗೊಳ್ಳುವುದು. ವಾಸನೆಯನ್ನು ಗ್ರಹಿಸುವ ಶಕ್ತಿ ಕಡಿಮೆಯಾಗುವುದು. ಚರ್ಮವು ಸುಕ್ಕುಗಟ್ಟುವುದು. ಚರ್ಮದ ಸ್ಪರ್ಶ ಗ್ರಹಣ ಶಕ್ತಿಯು ಕಡಿಮೆಯಾಗುವುದು. ನೆನಪಿನ ಶಕ್ತಿಯು ಕುಂದುವುದು. ಮೂತ್ರ ಜನಕಾಂಗ (Kidney) ಪಿತ್ತ ಜನಕಾಂಗ (Liver), ಹೃದಯ (Heart), ಶ್ವಾಸಕೋಶ (Lung) ಈ ಎಲ್ಲಾ ಅವಯವಗಳ ಕ್ರಿಯಾ ಸಾಮಥ್ರ್ಯ ಕುಂಠಿತಗೊಳ್ಳುವುದು. ಬದಲಾದ ಕುಟುಂಬ ಪದ್ಧತಿ ಹಾಗೂ ಜೀವನ ಶೈಲಿಯಿಂದಾಗಿ ಖಿನ್ನತೆ, ಮಾನಸಿಕ ಒತ್ತಡ, ಒಂಟಿತನದ ಭಾವ ಮುಂತಾದ ಮಾನಸಿಕ ತೊಂದರೆಗಳುಂಟಾಗುತ್ತವೆ. ಇನ್ನು ಮುಪ್ಪಿನ ಹಂತದಲ್ಲಿ ಜೀವನ ಶೈಲಿಯು ಆರೋಗ್ಯ ರಕ್ಷಣೆಯಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತದೆ.
1. ಮುಖ್ಯವಾಗಿ ಶಾರೀರಿಕವಾಗಿ ಹಾಗೂ ಮಾಕನಸಿಕವಾಗಿ ಬದಲಾವಣೆಗಳನ್ನು ಅರಿತುಕೊಳ್ಳಬೇಕು.
2. ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸಬೇಕು.
3. ಮುಪ್ಪಿನ ವಯಸ್ಸಿನಲ್ಲಿ ಜೀರ್ಣಶಕ್ತಿಯು ಕಡಿಮೆಯಾಗುವುದರಿಂದ ಸ್ವಲ್ಪ ಪ್ರಮಾಣದ ಆಹಾರವನ್ನು ನಿಗದಿತ ಸಮಯದಲ್ಲಿ ದಿನಕ್ಕೆ ನಾಲ್ಕು ಬಾರಿ ಸೇವಿಸುವುದು ಒಳ್ಳೆಯದು.
4. ಆಹಾರದಲ್ಲಿ ಏಕದಳ ಧಾನ್ಯಗಳಾದ ಅಕ್ಕಿ, ರಾಗಿ ಗೋಧಿ, ಜೋಳ ನವಣೆ ಸಜ್ಜೆ, ದ್ವಿದಳ ಧಾನ್ಯಗಳಾದ ಹೆಸರು, ಹುರುಳಿ, ಸೈಂಧವ ಎಂಬ ಉಪ್ಪು, ತರಕಾರಿಗಳಲ್ಲಿ ಮೂಲಂಗಿ, ಸೌತೆ, ಕ್ಯಾರಟ್, ನವಿಲುಕೋಸು, ಈರುಳ್ಳಿ, ಬೆಳ್ಳುಳ್ಳಿ, ಸೊಪ್ಪುಗಳಲ್ಲಿ ಮೆಂತ್ಯ, ಕೊತ್ತುಂಬರಿ, ಕರಿಬೇವು ಇವುಗಳ ಸೇವನೆ ಸೂಕ್ತ. ಮಾಂಸಾಹಾರವನ್ನು ಸೇವಿಸುವವರಿಗೆ ಮೇಕೆಯ ಮಾಂಸ, ಕೋಳಿಯ ಮಾಂಸ ಒಳ್ಳೆಯದು.
5. ಸಾಧ್ಯವಾದಷ್ಟು ಬೆಚ್ಚಗಿನ ನೀರನ್ನೇ ದಿನವಿಡೀ ಸೇವಿಸುವುದು ಒಳ್ಳೆಯದು.
6. ಊಟದಲ್ಲಿ ಒಂದು ಚಮಚ ಆಕಳ ತುಪ್ಪವನ್ನು ಬಳಸುವುದು ಸೂಕ್ತ.
7. ಪ್ರತಿದಿನ ಒಂದು ಲೋಟ ಆಕಳ ಹಾಲನ್ನು ಸೇವಿಸಬೇಕು.
8. ದಿನಕ್ಕೆ ಮೂರು ಲೀಟರ್ ನೀರು ಸೇವನೆ ಒಳ್ಳೆಯದು.
9. ಸುಲಭವಾಗಿ ಜೀರ್ಣವಾಗುವ ಆಹಾರ ಪದಾರ್ಥಗಳಾದ ಹಣ್ಣು ತರಕಾರಿಗಳು, ಬೇಯಿಸಿದ ಕಾಳು ಇವುಗಳನ್ನು ಸೇವಿಸಬೇಕು.
10. ಆಯಾ ಕಾಲಾನುಸಾರವಾಗಿ, ಆಯಾ ಸ್ಥಳಕ್ಕೆ ಅನುಸಾರವಾಗಿ ಲಭ್ಯವಾಗುವ ಹಣ್ಣು ತರಕಾರಿಗಳ ಬಳಕೆ ಪ್ರಶಸ್ತವಾದುದು.
11. ಬೆಳಿಗ್ಗೆ ಹಾಗೂ ಸಂಜೆ ಎರಡೂ ಹೊತ್ತು ನಡಿಗೆ (Walking) ಇರಲಿ.
12. ನಿಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಕೆಲಸ ಮಾಡಿ.
13. ದಿನಕ್ಕೆರಡು ಬಾರಿ ಪ್ರಾರ್ಥನೆ ಮಾಡಿ. ನಿಮ್ಮ ಮಾನಸಿಕ ಸ್ಥಿರತೆಗೆ ಒಳ್ಳೆಯದು.
14. ಯಾವಾಗಲೂ ಯಾವುದಾದರೂ ಒಂದು ಚಟುವಟಿಕೆಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.
15. ಮಲಗುವ ಹಾಸಿಗೆ ಸಮತಟ್ಟಾಗಿರಲಿ, ಮೆತ್ತಗಿರವ, ಏರುತಗ್ಗಾಗಿರುವ ಹಾಸಿಗೆಯ ಮೇಲೆ ಮಲಗುವುದರಿಂದ ಬೆನ್ನು ನೋವು, ನೊಂಟ ನೋವಿನ ತೊಂದರೆÀಗಳು ಬರುವ ಸಾಧ್ಯತೆಗಳಿವೆ, ಹೆಚ್ಚಾಗುವ ಸಾಧ್ಯತೆಗಳೂ ಇವೆ.
16. ಸಾಧ್ಯವಾದಷ್ಟು ಹತ್ತಿ ಬಟ್ಟೆಗಳನ್ನೇ ಸದಾ ಧರಿಸುವುದು ಸೂಕ್ತ.
17. ನಡೆಯುವಾಗ ಯಾವಾಗಲೂ ಆಧಾರಕ್ಕಾಗಿ ಊರುಗೋಲನ್ನು ಬಳಸಿಕೊಳ್ಳುವುದು ಬಹಳ ಒಳ್ಳೆಯದು.
18. ಪ್ರತಿದಿನ ಎಳ್ಳೆಣ್ಣೆಯನ್ನು ಮೈಗೆಲ್ಲಾ ಹಚ್ಚಿಕೊಳ್ಳುವುದು ಸೂಕ್ತ. ಅದರಲ್ಲೂ ಸಂಧಿ ಪ್ರದೇಶಗಳಾದ ಮೊಣಕೈ, ಮೊಣಕಾಲು, ಸೊಂಟದ ಪ್ರದೇಶ, ಭುಜ, ಕುತ್ತಿಗೆ, ತಲೆ, ಪಾದಗಳಿಗೆ (ಯಾವಾಗಲೂ) ದಿನಕ್ಕೊಮ್ಮೆಯಾದರೂ ಎಣ್ಣೆಯನ್ನು ನೀವಿಕೊಳ್ಳಬೇಕು.
19. ಸ್ನಾನಕ್ಕೆ ಬೆಚ್ಚಗಿನ ನೀರು ಸೂಕ್ತ.
20. ರಾತ್ರಿ ನಿದ್ದೆ ಕಡಿಮೆಯಾಗುವುದರಿಂದ ಹಗಲು ಸ್ವಲ್ಪ ವಿಶ್ರಾಂತಿ ಪಡೆಯುವುದು ಒಳ್ಳೆಯದು.
21. ಹೂದೋಟದ ಕೆಲಸ, ಒಳ್ಳೆಯ ಪುಸ್ತಕಗಳನ್ನು ಓದುವುದು ದಿನಪತ್ರಿಕೆಗಳ ಓದುವಿಕೆ, ನಡಿಗೆ, ಆತ್ಮೀಯರೊಡನೆ ಮಾತು, ಹಾಡು, ಕುಶಲಕಲೆ ಹೀಗೆ ಯಾವುದಾದರೊಂದು ಚಟುವಟಿಕೆಯಿರಲಿ.
22. ಕಲಿಕೆಗೆ ವಯಸ್ಸಿನ ನಿರ್ಬಂಧವಿಲ್ಲ. ಹಾಗಾಗಿ ಯಾವುದಾದರೊಂದು ಕಲಿಕೆಯಲ್ಲಿ (ಅದು ಸಂಗೀತ, ಚಿತ್ರಕಲೆ, ಭಾಷೆ ಹೀಗೆ ಯಾವುದಾದರೊಂದು ಆಗಿರಲಿ) ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಕು.
23. ಸದಾ ಧನಾತ್ಮಕ ಆಲೋಚನೆ ನಿಮ್ಮದಾಗಿರಲಿ.
24. ಕ್ರಮಬದ್ಧವಾದ ದಿನಚರಿ, ಜೀವನ ಶೈಲಿ ನಿಮಗಿರಲಿ.
ವೃದ್ಧಾಪ್ಯವೆಂಬುದು ವರ, ವೃದ್ಧಾಪ್ಯವು ಹೊರೆಯಲ್ಲ, ವೃದ್ಧಾಪ್ಯವನ್ನರಿತು ಅದು ಸಹಜವೆಂದು ಸ್ವೀಕರಿಸಿದರೆ ಬಾಳು ಹಸನು, ಬದುಕಿಗೂ ಆಗ ಸಾರ್ಥಕತೆ.
ಡಾ. ಶ್ರೀವತ್ಸ.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!