ಅವೈಜ್ಞಾನಿಕವಾಗಿ ನಿರ್ಮಿಸಿರುವ ರೈಲ್ವೆ ಅಂಡರ್ ಪಾಸ್ ನಿಂದಾಗಿ ಮಳೆ ನೀರು ಹರಿಯದಂತಾಗಿದೆ. ಇದರಿಂದಾಗಿ ಈ ಭಾಗದ ಜನರಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ನಗರದ ಸುತ್ತ ಮುತ್ತ ಜನದಟ್ಟಣೆಯಿರುವೆಡೆ ಅನುಕೂಲವಾಗಲೆಂದು ನಿರ್ಮಿಸಿರುವ ಅಂಡರ್ ಪಾಸ್ ಗಳು ಈಗ ಜನರಿಗೆ ಶಾಪವಾಗಿ ಪರಿಣಮಿಸಿದೆ. ಮಳೆ ನೀರು ಹರಿದು ಹೋಗದೆ ನಿಲ್ಲುವುದರಿಂದಾಗಿ ಇಲ್ಲಿ ಡಾಂಬರು ಕಿತ್ತುಹೋಗಿ ತಳದಲ್ಲಿ ಕಂಬಿಗಳು, ಜಲ್ಲಿ ಕಲ್ಲುಗಳು, ಹಳ್ಳಗಳು ಮೃತ್ಯುಕೂಪಗಳಾಗಿವೆ.
‘ಅತ್ಯಂತ ಅವೈಜ್ಞಾನಿಕವಾಗಿ, ಆತುರದಿಂದ ನಿರ್ಮಿಸಿರುವ ಅಂಡರ್ ಪಾಸ್ ಗಳಲ್ಲಿ ಶೇಖರಣೆಯಾಗುವ ನೀರನ್ನು ಕೆಲವೆಡೆ ಸಾರ್ವಜನಿಕರೇ ಖಾಲಿ ಮಾಡಿದರೆ, ಕೆಲ ಬಾರಿ ನಗರಸಭೆಯವರು ಜನರ ಒತ್ತಾಯಕ್ಕೆ ಮಣಿದು ಖಾಲಿ ಮಾಡಿಸುವ ಸ್ಥಿತಿಯಿದೆ. ನೀರು ನಿಂತು ಇಲ್ಲಿ ರಸ್ತೆಯು ಹಾಳಾಗಿದ್ದು, ಅಪಘಾತಗಳಿಗೆ ಕಾರಣವಾಗಿದೆ’ ಎಂದು ಮಾಜಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರಪ್ಪ ದೂರಿದ್ದಾರೆ.
ಅಂಡರ್ ಪಾಸ್ ಗಳ ಮೂಲಕ ಹೋದರೆ ಹಲವಾರು ಹಳ್ಳಿಗಳಿಗೆ ಹಾದು ಹೋಗುವ ಮುಖ್ಯ ರಸ್ತೆಯಿದೆ, ವಾಹನ ಸಂಚಾರ ದಟ್ಟವಾಗಿರುತ್ತದೆ. ಈ ಭಾಗದಲ್ಲಿ ನೀರು ಶೇಖರಣೆಯಾಗುವುದರಿಂದ ಪಾದಚಾರಿಗಳು, ದ್ವಿಚಕ್ರವಾಹನ ಸವಾರರು ತುಂಬ ತೊಂದರೆ ಅನುಭವಿಸುತ್ತಿದ್ದಾರೆ. ಅನೇಕರು ಜಾರಿ ಬಿದ್ದು ಗಾಯಗೊಂಡಿರುವ ಪ್ರಕರಣಗಳು ಸಹ ನಡೆದಿದ್ದು, ಎಷ್ಟು ಬಾರಿ ಮನವಿ ಸಲ್ಲಿಸಿದರೂ ಸಹ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿಲ್ಲ ಎಂದು ಅವರು ಆಕ್ರೋಷ ವ್ಯಕ್ತಪಡಿಸಿದರು.
ಇದ್ಲೂಡಿನ ರಸ್ತೆಯ ಅಂಡರ್ ಪಾಸ್ ನಲ್ಲಿ ಮಳೆಯಿಂದ ಬಿದ್ದ ನೀರು ಸಂಗ್ರಹಗೊಂಡಿರುವುದನ್ನು ಮಂಗಳವಾರ ನಗರಸಭೆಯಿಂದ ಸಕ್ಕಿಂಗ್ ಯಂತ್ರದ ಮೂಲಕ ನೀರನ್ನು ಹೀರಿ ಸಾರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿಕೊಟ್ಟರು.
‘ರೈಲ್ವೆ ಅಂಡರ್ಪಾಸ್ ಸೇತುವೆ ನಿರ್ಮಾಣ ಹಂತದಲ್ಲಿ ದೂರದೃಷ್ಟಿಯಿಂದ ಯೋಜನೆಯನ್ನು ರೂಪಿಸಬೇಕಾಗಿತ್ತು. ಈ ರೈಲ್ವೆ ಅಂಡರ್ಪಾಸ್ ಕಾಮಗಾರಿ ನಡೆಯುವ ಸಮಯದಲ್ಲಿ ಸ್ಥಳಕ್ಕೆ ಭೇಟಿ ಸಂಸದರು ಪರಿಶೀಲನೆ ನಡೆಸಿದ್ದರೂ ಸಹ ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಈ ಸೇತುವೆಗಳಿಂದ ಇಂದು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ರೈಲ್ವೆ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಸಾರ್ವಜನಿಕರು ಹಿಡಿ ಶಾಪ ಹಾಕುವಂತಾಗಿದೆ’ ಎಂದು ಇದ್ಲೂಡು ವೆಂಕಟೇಶಪ್ಪ, ಆನಂದ್, ಗಾಂಧಿನಗರ ಹರೀಶ್ ದೂರಿದರು.
- Advertisement -
- Advertisement -
- Advertisement -
- Advertisement -