1. ‘ನೀವು ಏನನ್ನು ಕೊಡುತ್ತೀರೋ ಅದು ನಿಮಗೆ ಹಿಂತಿರುಗಿ ಬರುತ್ತದೆ’ ಎಂಬ ಮಾತು ಸುಳ್ಳಲ್ಲ. ನೀವು ಜನರಿಗೆ ಪ್ರೀತಿ, ಗೌರವ ಕೊಟ್ಟರೆ ಅವರು ಅದನ್ನೇ ನಿಮಗೆ ಹಿಂದಕ್ಕೆ ಕೊಡುತ್ತಾರೆ. ಆದ್ದರಿಂದ ಯಾರನ್ನೂ ದ್ವೇಷಿಸಬಾರದು.
2. ನಿಮ್ಮನ್ನು ಬೇರೆಯವರೊಡನೆ ಹೋಲಿಸಿಕೊಳ್ಳಬೇಡಿರಿ. ಅದು ನಿಮಗೆ ನೀವೇ ಅವಮಾನ ಮಾಡಿಕೊಂಡಂತೆ. ನಮ್ಮನ್ನು ನಾವು ಗೌರವಿಸಿಕೊಳ್ಳದಿದ್ದರೆ ಮತ್ಯಾರು ಗೌರವಿಸಿಯಾರು? ನಮ್ಮ ಸಾಮಥ್ರ್ಯವನ್ನು ಎಂದೂ ಲಘುವಾಗಿ ಪರಿಗಣಿಸುವುದು ಬೇಡ.
3. ‘ನಾನು ಪರಮಸಂತುಷ್ಟ. ನನಗೆ ಯಾವ ವಸ್ತುಗಳ ಕೊರತೆಯೂ ಇಲ್ಲ.’ ಎಂದು ಭಾವಿಸಿ ಅದು ನಮ್ಮ ಬದುಕಿನ ಅತ್ಯಂತ ಆನಂದದ ಕ್ಷಣವಾಗಿರುತ್ತದೆ. ಜೀವನಾನಂದಕ್ಕೆ ಹಣ ಮತ್ತು ವಸ್ತುಗಳೇ ಮುಖ್ಯವಲ್ಲ.
5. ದೈನಂದಿನ ಜೀವನದಲ್ಲಿ ಕಾಯುವ ಪ್ರಸಂಗ ಬಂದರೆ ಅದಕ್ಕೆ ಸಿಡಿಮಿಡಿಗೊಳ್ಳಬೇಡಿ. ಇಂಥ ಪ್ರಸಂಗಗಳು ನಮಗೆ ಸಹನೆಯನ್ನು ಕಲಿಸುತ್ತದೆ. ಕಾಯುವ ಸಮಯವನ್ನು ಸದುಪಯೋಗ ಮಾಡಿಕೊಳ್ಳುವುದು ಹೇಗೆ ಎಂದು ಯೋಚಿಸಿ. ಆಗ ಕಾಯುವ ಕೆಲಸ ಕೈಲಾಸವೆನಿಸುತ್ತದೆ.
6. ನಾವು ಹೇಗೆ ಮಾತನಾಡಬೇಕೆಂದರೆ, ನಮ್ಮ ಮಾತನ್ನು ಕೇಳಲು ಜನ ಉತ್ಸುಕರಾಗಬೇಕು. ಹಾಗೆಯೇ ಜನರ ಮಾತನ್ನು ಹೇಗೆ ಕೇಳಬೇಕೆಂದರೆ ಅವರು ಇನ್ನೂ ಉತ್ಸುಕರಾಗಿ ನಮ್ಮೊಡನೆ ಮಾತನಾಡುವಂತಿರಬೇಕು. ಉತ್ತಮ ಕೇಳುಗ-ಮಾತುಗಾರನಿಗೆ ಎಲ್ಲೆಡೆಯೂ ಒಂದು ಜಾಗ ಕಾದಿರುತ್ತದೆ.
8. ಯಾವುದೇ ಸಂದರ್ಭ, ಸನ್ನಿವೇಶ ನಿಮ್ಮ ಮಾನಸಿಕ ಸಮತೋಲನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು. ಆಗ ನೀವು ಸನ್ನಿವೇಶದ ಬಂಧಿಯಾಗುತ್ತೀರಿ. ಸದಾ ಸನ್ನಿವೇಶವನ್ನು ಮೀರಿ ನಿಲ್ಲುವ ಮನಸ್ಥಿತಿಯನ್ನು ರೂಪಿಸಿಕೊಳ್ಳಲು ಪ್ರಯತ್ನಿಸಬೇಕು.
9. ಯಾವುದೇ ಕೆಲಸವನ್ನು ಬಹಳ ಶಾಂತಿಯಿಂದ, ದೃಢತೆಯಿಂದ ಸರಿಯಾದ ಯೋಜನೆಯೊಂದಿಗೇ ಕೈಗೊಂಡಲ್ಲಿ ಜಯ ಲಭಿಸುವುದು ಖಚಿತ.
10. ಪ್ರತಿದಿನ ನಾವು ಒಂದಿಲ್ಲೊಂದು ಘತನೆ, ಸನ್ನಿವೇಶಗಳನ್ನು ಎದುರಿಸುತ್ತೇವೆ. ಅವುಗಳಲ್ಲಿ ಹುದುಗಿರುವ (ಅಡಗಿರುವ) ಸಂದೇಶವನ್ನು ಗ್ರಹಿಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಂಡರೆ, ನಮ್ಮ ಜೀವನಾನುಭವ ಶ್ರೀಮಂತವಾಗುತ್ತದೆ. ಬದುಕಿನಲ್ಲಿ ಕೊರಗದೇ ಅದು ಹೇಳುವ ಪಾಠವನ್ನು ಕೇಳೋಣ.
12. ಜೀವನದಲ್ಲಿ ಎರಡು ಸಂಗತಿಗಳು ಆನಂದ ಮತ್ತು ಯಶಸ್ಸನ್ನು ತರುತ್ತದೆ. ಯಾವ ಅನುಕೂಲಗಳೂ ಇಲ್ಲದಿದ್ದಾಗ ನೀವು ಜೀವನವನ್ನು ಹೇಗೆ ಎದುರಿಸುತ್ತೀರ ಮತ್ತು ಎಲ್ಲ ಅನುಕೂಲಗಳೂ ಇದ್ದಾಗ ನೀವು ಹೇಗೆ ವರ್ತಿಸುತ್ತೀರ ಎಂಬುದನ್ನು ಆಧರಿಸುತ್ತದೆ.
13. ನೀವೇನು ಎಂಬುದು ನಿಮಗೆ ಗೊತ್ತಿರಲಿ. ನಿಮ್ಮೊಳಗೆ ಏನೋ ವಿಶೇಷವಿದೆ ಎಂಬ ಬಗ್ಗೆ ನಿಮಗೆ ನಂಬಿಕೆಯಿರಲಿ. ಜೀವನದಲ್ಲಿ ಎದುರಾಗುವ ಯಾವುದೇ ಅಡ್ಡಿ ಆತಂಕಗಳನ್ನು ಸಮರ್ಥವಾಗಿ ಎದುರಿಸುವ ಆತ್ಮವಿಶ್ವಾಸ ನಿಮಗಿರಲಿ.
14. ನೀವು ಒಂದು ವೇಳೆ ಕೋಪಿಷ್ಠರಾಗಿದ್ದಲ್ಲಿ ನಿಮಗೆ ಬೇರೆ ಯಾವ ಶತ್ರುಗಳೂ ಬೇಕಾಗಿಲ್ಲ. ನೀವು ಬುದ್ಧಿವಂತರಾಗಿದ್ದರೆ ನಿಮಗೆ ಸಿರಿವಂತರ ಅಗತ್ಯವಿಲ್ಲ. ನಾವು ಹೇಗಿರಬೇಕೆಂಬುದು ನಮಗೆ ಗೊತ್ತಾಗುವಂಥ ವಿವೇಕವನ್ನು ಗಳಿಸಿಕೊಳ್ಳಬೇಕು.
15. ನಮ್ಮ ಶೇ. 99 ಸಮಸ್ಯೆಗಳು, ಶೇ 1 ರಷ್ಟು ಸಂಕಷ್ಟಗಳಿಗೆ ನಮ್ಮ ನಿಷ್ಕಾಳಜಿ, ವಿವೇಚನಾರಹಿತ ನಿರ್ಧಾರವೇ ಕಾರಣ. ಸಣ್ಣ ಸಂಗತಿಗಳಿಗೂ ವಿವೇಕಯುತ ನಿರ್ಧಾರ ತೆಗೆದುಕೊಳ್ಳಿ ಹಾಗೂ ಮಹತ್ವವನ್ನು ಕೊಡಿರಿ.
ಡಾ. ಶ್ರೀವತ್ಸ
ಮುಂದುವರೆಯುವುದು…..