Home News ಅಕ್ಷರ ದಾಸೋಹ ನೌಕರರ ಪ್ರತಿಭಟನೆ

ಅಕ್ಷರ ದಾಸೋಹ ನೌಕರರ ಪ್ರತಿಭಟನೆ

0

ನಗರದ ಇಂಡೇನ್ ಗ್ಯಾಸ್ ಮಳಿಗೆಗೆ ಭಾನುವಾರ ಅಕ್ಷರ ದಾಸೋಹ ನೌಕರರು ಮುತ್ತಿಗೆ ಹಾಕಿ ಶಾಲೆಗಳಿಗೆ ಸಮರ್ಪಕವಾಗಿ ಗ್ಯಾಸ್ ವಿತರಿಸುತ್ತಿಲ್ಲವೆಂದು ಪ್ರತಿಭಟಿಸಿದರು.
ತಾಲ್ಲೂಕಿನ ಚೌಡರೆಡ್ಡಿ ಹಳ್ಳಿ ಹಾಗೂ ವೆಂಕಟಾಪುರ ಪಂಚಾಯತಿಯ ಹಳ್ಳಿಗಳ ಶಾಲೆಗಳಿಗೆ ಸರಿಯಾಗಿ ಗ್ಯಾಸ್ ಸಿಲಿಂಡರ್ ವಿತರಿಸದೆ ಬಿಸಿ ಊಟದ ಅಡುಗೆ ಮಾಡಲು ಆಗುತ್ತಿಲ್ಲ. ಸೌದೆ ಬಳಸಿ ಅಡುಗೆ ಮಾಡಬೇಕಾಗಿದೆ. ಗ್ಯಾಸ್ ವಿತರಕರನ್ನು ಕೇಳಿದರೆ ಪ್ರತಿ ತಿಂಗಳೂ 10 ನೇ ತಾರೀಖಿನೊಳಗೆ ವಿತರಿಸುತ್ತೇವೆನ್ನುತ್ತಾರೆ. ಆದರೆ ಕೆಲವೆಡೆ 3 ತಿಂಗಳಾದರೂ ಗ್ಯಾಸ್ ಸಿಲಿಂಡರ್ ವಿತರಿಸಿಲ್ಲ. ಶಾಲೆಗಳಲ್ಲಿ ನಾವು ಅಡುಗೆ ಮಾಡುವುದು ಹೇಗೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಇನ್ನು ಮುಂದೆ ಸರ್ಪಕವಾಗಿ ವಿತರಿಸುತ್ತೇವೆ ಎಂದು ವಿತರಕರು ಹೇಳಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಅಕ್ಷರ ದಾಸೋಹ ನೌಕರ ಸಂಘದ ತಾಲ್ಲೂಕು ಅಧ್ಯಕ್ಷೆ ಮುನಿಲಕ್ಷ್ಮಮ್ಮ, ಡಿ.ವೈ.ಎಫ್.ಐ ರಾಜ್ಯ ಸಂಚಾಲಕ ಮುನೀಂದ್ರ, ಗೀತಾ, ಶಾಂತಾ, ಮಂಜುಳ, ವೆಂಕಟಲಕ್ಷ್ಮಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.