Home News ಅಪಘಾತ ಬೈಕ್ ಸವಾರ ಸಾವು

ಅಪಘಾತ ಬೈಕ್ ಸವಾರ ಸಾವು

0

ತಾಲ್ಲೂಕಿನ ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯತಿಯ ವಾರದಹುಣಸೇನಹಳ್ಳಿ ಗ್ರಾಮದ ಸುರೇಶ್(35) ಬೈಕ್ ಅಪಘಾತದಲ್ಲಿ ಶನಿವಾರ ಮೃತಪಟ್ಟಿದ್ದಾರೆ.
ತಾಲ್ಲೂಕಿನ ಬಚ್ಚಹಳ್ಳಿ ಗೇಟ್ ಬಳಿ ಭಾರತ್ ಗ್ಯಾಸ್ ಸಿಲಿಂಡರ್ಗಳನ್ನು ತುಂಬಿಕೊಂಡು ಶಿಡ್ಲಘಟ್ಟದ ಕಡೆಯಿಂದ ಹೋಗುತ್ತಿದ್ದ ಲಾರಿಗೆ ಚಿಂತಾಮಣಿ ಕಡೆಯಿಂದ ಬೂಸ ಮೂಟೆ ಇಟ್ಟುಕೊಂಡು ಬೈಕ್ನಲ್ಲಿ ಬರುತ್ತಿದ್ದ ಸುರೇಶ್ ಡಿಕ್ಕಿಯಾಗಿ ಅಪಘಾತಕ್ಕೀಡಾಗಿದ್ದಾರೆ. ಅಪಘಾತದ ಪರಿಣಾಮ ಎರಡೂ ಕಾಲುಗಳು ತುಂಡಾಗಿದ್ದು, ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾರೆ.
ತಾಲ್ಲೂಕಿನ ಬಚ್ಚಹಳ್ಳಿ ಗೇಟ್ ಬಳಿ ರಸ್ತೆ ಕಿರಿದಾಗಿದ್ದು, ಹಳ್ಳಗಳಿಂದ ಕೂಡಿದೆ. ಇದರಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ರಸ್ತೆಯನ್ನು ಸರಿಪಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

error: Content is protected !!