Home News ಆತ್ಮಹತ್ಯೆಗೆ ಶರಣಾದ ರೈತ

ಆತ್ಮಹತ್ಯೆಗೆ ಶರಣಾದ ರೈತ

0

ಸಾಲದ ಹೊರೆ ಹೆಚ್ಚಿ ರೈತನೋರ್ವ ವಿಷ ಸೇವಿಸಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾಲ್ಲೂಕಿನ ಆನೂರು ಗ್ರಾಮದ ಪ್ರಕಾಶ್(೪೨) ಮೃತ ದುರ್ದೈವಿಯಾಗಿದ್ದಾನೆ.
ಮೃತ ಪ್ರಕಾಶ ಪತ್ನಿ ಪದ್ಮ ಹಾಗೂ ಇಬ್ಬರು ಮಕ್ಕಳಾದ ವಿಕಾಸ್ ಮತ್ತು ವಿಶಾಲ್ರನ್ನು ಅಗಲಿದ್ದು ಆತ್ಮಹತ್ಯೆಗೆ ಮಾಡಿದ್ದ ಸಾಲ ಕಾರಣ ಎನ್ನಲಾಗಿದೆ.
ಗ್ರಾಮದಲ್ಲಿ ಐದು ಎಕರೆ ಜಮೀನಿದ್ದು ಕೃಷಿ ಮಾಡಲು ನೀರಿಲ್ಲದೇ ಇದ್ದುದರಿಂದ ಈಗಾಗಲೇ ಎರಡು ಕೊಳವೆ ಬಾವಿ ಕೊರೆಸಿದ್ದನಾದರೂ ಎರಡೂ ವಿಫಲವಾಗಿವೆ. ಜಮೀನಿದ್ದರೂ ಕೃಷಿ ಮಾಡಲು ನೀರಿಲ್ಲದೇ ಇದ್ದುದರಿಂದ ಸುಮಾರು ೧೦ ಲಕ್ಷಕ್ಕೂ ಹೆಚ್ಚು ಕೈ ಸಾಲ ಮಾಡಿಕೊಂಡಿದ್ದ ಪ್ರಕಾಶ ಮತ್ತೊಂದು ಕೊಳವೆ ಬಾವಿ ಕೊರೆಸಬೇಕು ಎಂದು ಈ ಭಾರಿಯಾದರೂ ಕೊಳವೆಬಾವಿಯಲ್ಲಿ ನೀರು ಸಿಗಲಿ ಎಂದು ಪ್ರಾರ್ಥಿಸಲು ತನ್ನ ಪತ್ನಿ ಹಾಗು ಮಕ್ಕಳನ್ನು ಶಿರಡಿಗೆ ಕಳುಹಿಸಿ ಗ್ರಾಮದ ತಮ್ಮ ತೋಟದಲ್ಲಿರುವ ತಮ್ಮ ತಂದೆಯ ಸಮಾಧಿ ಬಳಿ ಹೋಗಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
 

error: Content is protected !!