Home News ಉಚಿತ ನ್ಯೂರೋ ಮತ್ತು ಮನೋರೋಗ ಶಿಬಿರ

ಉಚಿತ ನ್ಯೂರೋ ಮತ್ತು ಮನೋರೋಗ ಶಿಬಿರ

0

ತಾಲ್ಲೂಕಿನಲ್ಲಿ ಬಹಳಷ್ಟು ಜನರಿಗೆ ಅವಶ್ಯಕವಾಗಿದ್ದ ನ್ಯೂರೋ ಮತ್ತು ಮನೋರೋಗ ಶಿಬಿರವನ್ನು ಉಚಿತವಾಗಿ ಅಕ್ಟೋಬರ್ 9ರ ಭಾನುವಾರದಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗುತ್ತಿದೆ. ಇದರ ಸದುಪಯೋಗವನ್ನು ಪಡಿಸಿಕೊಳ್ಳುವಂತೆ ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಕೋರಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಯಲಹಂಕದ ನವಚೇತನ ಆಸ್ಪತ್ರೆ, ಬೆಂಗಳೂರು ನ್ಯೂರೋ ಸೆಂಟರ್ ಸಹಯೋಗದೊಂದಿಗೆ ಈ ಬೃಹತ್ ಶಿಬಿರವನ್ನು ಆಯೋಜಿಸಿದ್ದು, ನ್ಯೂರಾಲಜಿ, ಸೈಕಿಯಾಟ್ರಿ, ಫಿಸಿಯೋಥೆರಪಿ, ಇ.ಸಿ.ಜಿ, ಜಿ.ಆರ್.ಬಿ.ಎಸ್, ರಕ್ತದೊತ್ತಡ ಮೊದಲಾದ ಪರೀಕ್ಷೆಗಳನ್ನು ತಜ್ಞರು ನಡೆಸಿಕೊಡುವರು. ತಲೆ ನೋವು(ಮೈಗ್ರೇನ್), ಅಪಸ್ಮಾರ, ಮೂರ್ಚೆ ರೋಗ, ಅದುರು ರೋಗ, ತಲೆ ಸುತ್ತುವಿಕೆ, ಬೆನ್ನು ನೋವು, ಖಿನ್ನತೆ, ಮರೆಗುಳಿತನ, ನರರೋಗದ ನೋವು, ಆತಂಕ ಮೊದಲಾದ ತೊಂದರೆಗಳಿದ್ದವರು ಬಂದು ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳಬಹುದು.
ಖಿನ್ನತೆಗೊಳಗಾದವರಿಗೆ, ದುಶ್ಚಟಕ್ಕೆ ಬಲಿಯಾದವರಿಗೆಂದೇ ತಜ್ಞ ಸಮಾಲೋಚಕರು ಬರಲಿದ್ದಾರೆ. ನರರೋಗ ತಜ್ಞರಾದ ಡಾ.ಆರ್.ಉಮಾಶಂಕರ್, ಡಾ.ಎನ್.ಶೋಭಾ, ಡಾ.ಗಿರೀಶ್ ಗಾರ್ಡೆ, ಡಾ.ಕೃಷ್ಣಪ್ರಸಾದ್, ಡಾ.ಗುರುಪ್ರಸಾದ್ ಎಸ್.ಪೂಜಾರ್, ಡಾ.ಕಿರಣ್ ಕಾನಪುರೆ, ಮನೋರೋಗ ತಜ್ಞರಾದ ಡಾ.ಅನಿತಾ ಚಂದ್ರ, ಡಾ.ಬಿ.ಜಿ. ಗಿರೀಶ್ಚಂದ್ರ ಆಗಮಿಸುತ್ತಾರೆ ಎಂದು ತಿಳಿಸಿದರು.
ನವಚೇತನ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಹಮ್ಮದ್ ರಫಿ, ಡಾ. ಸಿ.ಎಂ.ಅರುಣ್, ಭಾರ್ಗವಿ, ಆನಂದ್ಕುಮಾರ್, ಆನೂರು ಶ್ರೀನಿವಾಸ್, ಛಲಪತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.