24.1 C
Sidlaghatta
Wednesday, November 12, 2025

ಎಲ್.ಮುತ್ತುಕದಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ: ೨೦೦ ಅಡಿ ಕನ್ನಡ ಭಾವುಟದ ಪಥ ಸಂಚಲನ

- Advertisement -
- Advertisement -

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕೇವಲ ನವೆಂಬರ್ ತಿಂಗಳಿಗೆ ಸೀಮಿತ ಆಗದೆ ವರ್ಷದ ಎಲ್ಲ ದಿನವೂ ಕನ್ನಡ ತಾಯಿ ಆರಾಧನೆ ಆಗಬೇಕು. ಆಗಲೆ ಕನ್ನಡ ನಾಡು, ನೆಲ, ಜಲ, ಕನ್ನಡಿಗನ ಬದುಕು ಹಸನಾಗುತ್ತದೆ ಎಂದು ಶಾಸಕ ಎಂ.ರಾಜಣ್ಣ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಎಲ್.ಮುತ್ತುಕದಹಳ್ಳಿಯಲ್ಲಿ ಭಾನುವಾರ ಯುವ ಕ್ರಾಂತಿ ಸಂಘದಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡದ ಕಾರ್ಯಕ್ರಮಗಳು ವರ್ಷದ ಉದ್ದಕ್ಕೂ ಜರುಗಬೇಕು, ಆಗಲೆ ಕನ್ನಡ ನಾಡು ನುಡಿ ಭಾಷೆ ಬೆಳೆಯಲು ಸಾಧ್ಯ. ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯಪ್ರವೃತ್ತರಾಗಬೇಕು, ಅದರಲ್ಲು ಯುವ ಜನಾಂಗ ಈ ನಿಟ್ಟಿನಲ್ಲಿ ಸಕ್ರೀಯವಾಗಬೇಕೆಂದರು.
ಉಪನ್ಯಾಸಕ ಪ್ರದೀಪ್ ಮಾತನಾಡಿ, ಯುವಕರು ಎಂತಹ ಸಮಯ, ಪರಿಸ್ಥಿತಿಯಲ್ಲೂ ನಿರಾಶವಾದಿಗಳಾಗಬೇಡಿ, ಆಶಾವಾದಿಗಳಾಗಿ ಎಂದರು.
ಕನ್ನಡ ರಾಜ್ಯೋತ್ಸವ ಅಂಗವಾಗಿ ಗ್ರಾಮದ ಮನೆ ಮನೆಗೂ ತಲಾ ಎರಡು ಸಸಿಗಳನ್ನು ವಿತರಿಸಲಾಯಿತು. ೨೦೦ ಅಡಿ ಉದ್ದದ ಕನ್ನಡ ಧ್ವಜವನ್ನು ಯುವ ಕ್ರಾಂತಿ ಸಂಘದ ಸದಸ್ಯರು ಗ್ರಾಮದಲ್ಲಿ ಮಾತ್ರವಲ್ಲ ಶಿಡ್ಲಘಟ್ಟ ನಗರದಲ್ಲೂ ಪ್ರದರ್ಶಿಸಿ ಕನ್ನಡಿಗರ ಗಮನವನ್ನು ಸೆಳೆದರು.
ವೈದ್ಯ ಡಾ.ಸತ್ಯನಾರಾಯಣರಾವ್, ಯುವ ಕ್ರಾಂತಿ ಸಂಘದ ಎಲ್ಲ ಸದಸ್ಯರು ಹಾಜರಿದ್ದರು.
 

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!