ಶಿಡ್ಲಘಟ್ಟದ ಪ್ರವಾಸಿ ಮಂದಿರದಲ್ಲಿ ಕರವೇ ತಾಲ್ಲೂಕು ಘಟಕದ (ಪ್ರವೀಣ್ ಶೆಟ್ಟಿ ಬಣ) ಯುವಕರ ಹಾಗೂ ಕಾರ್ಮಿಕ ಘಟಕಗಳ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ತಾಲ್ಲೂಕು ಯುವಕರ ಘಟ್ಟಕದ ಅಧ್ಯಕ್ಷರಾಗಿ ಗಜೇಂದ್ರ, ಉಪಾಧ್ಯಕ್ಷ ನವೀನ್ ಹಾಗೂ ಕಾರ್ಮಿಕ ಘಟಕದ ಅಧ್ಯಕ್ಷರನ್ನಾಗಿ ತೊಸಿಫ್, ತಾಲ್ಲೂಕು ಉಪಾಧ್ಯಕ್ಷರಾಗಿ ಸತೀಶ್, ಖಜಾಂಚಿಯಾಗಿ ಶ್ರೀನಿವಾಸ್, ಕಾನೂನು ಸಲಹೆಗಾರರಾಗಿ ಜಯರಾಮ್ ರೆಡ್ಡಿ ಅವರನ್ನು ಅಧ್ಯಕ್ಷ ವಸಂತಕುಮಾರ್ ನೇಮಕ ಮಾಡಿದರು.