Home News ಕಾಡು ಬೆಳೆಸಿ ನಾಡು ಉಳಿಸಿ

ಕಾಡು ಬೆಳೆಸಿ ನಾಡು ಉಳಿಸಿ

0

ಗಿಡ ಮರಗಳನ್ನು ಹೆಚ್ಚಾಗಿ ಬೆಳೆಸುವುದರಿಂದ ಕಾಲ ಕಾಲಕ್ಕೆ ಮಳೆಯಾಗುವುದಷ್ಟೇ ಅಲ್ಲದೇ ನಶಿಸಿಹೋಗುತ್ತಿರುವ ಕಾಡನ್ನು ಉಳಿಸಿ ಬೆಳೆಸಿದಂತಾಗುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮೇಲ್ವಿಚಾರಿಕಿ ಲಕ್ಷ್ಮಿ ಹೇಳಿದರು.
ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಹೊಸಪೇಟೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘ, ಜ್ಞಾನ ವಿಕಾಸ ಮತ್ತು ಸ್ವಸಹಾಯ ಸಂಘಗಳ ಸಹಯೋಗದಲ್ಲಿ ಬೀಜದ ಉಂಡೆ ತಯಾರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬೀಜದ ಉಂಡೆ ತಯಾರಿಸಿ ಇಡುವುದರಿಂದ ಇದು ಯಾವುದೇ ಮಳೆಯಾಶ್ರಯವಿಲ್ಲದೇ ಸುಮಾರು ಮೂರ್ನಾಲ್ಕು ವರ್ಷ ತಮ್ಮ ಅಸ್ಥಿತ್ವ ಉಳಿಸಿಕೊಳ್ಳುತ್ತದೆ. ಮಳೆ ಬಂದ ನಂತರ ಮಣ್ಣಿನ ಉಂಡೆ ತೇವಾಂಶವನ್ನು ಹೀರಿಕೊಂಡು ಮೊಳಕೆಯೊಡೆಯುತ್ತದೆ. ಗುಡ್ಡಾಗಾಡು ಹಾಗು ಇಳಿಜಾರು ಪ್ರದೇಶಗಳಲ್ಲಿ ಮಳೆಗಾಲದ ಸಮಯದಲ್ಲಿ ಎಸೆದಿರುವ ಬೀಜದ ಉಂಡೆ ಮೊಳೆಕೆ ಹೊಡೆದು ಗಿಡ ಮರಗಳು ಉತ್ಪತ್ತಿಗೊಳುತ್ತದೆ. ಇದರಿಂದ ಸುತ್ತ ಮುತ್ತಲಿನ ಪರಿಸರ ಸಮೃದ್ದಿಗೊಳ್ಳುತ್ತದೆ. ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸುವ ಪ್ರಯತ್ನವನ್ನು ಎಲ್ಲರೂ ಸೇರಿ ಮಾಡಬೇಕು ಎಂದರು.
ಈ ಹಿಂದೆ ಯೋಜನೆಯಲ್ಲಿ ಗಿಡ ನೆಡುವ ಕಾಯಕ್ರಮ ಮಾಡಿದ್ದು, ಈ ವರ್ಷದಲ್ಲಿ ಬೀಜದ ಉಂಡೆ ತಯಾರಿಕೆಯನ್ನು ರೂಪಿಸಿದ್ದೇವೆ. ತಾಲೂಕಿನಾಧ್ಯಂತ ಪ್ರಸಕ್ತ ವರ್ಷ 50 ಸಾವಿರ ಬೀಜದ ಉಂಡೆಗಳನ್ನು ತಯಾರಿ ಮಾಡುವ ಗುರಿ ಹೊಂದಿದ್ದು ಈಗಾಗಲೇ 20 ಸಾವಿ ಬೀಜದ ಉಂಡೆ ತಯಾರಿಸಲಾಗಿದೆ.
ಈ ಸಂಧರ್ಭದಲ್ಲಿ ಮಹಿಳಾ ಜ್ಞಾನ ವಿಕಾಸ ಸಮನ್ವಯಾದಿಕಾರಿ ಜ್ಯೋತಿ, ಸೇವಾ ಪ್ರತಿನಿಧಿ ಸುಶೀಲಮ್ಮ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರು ಹಾಜರಿದ್ದರು.

error: Content is protected !!