Home News ಕಾಲುವೆಯನ್ನು ತೆರವುಗೊಳಿಸಿದ ರೈತ ಸಂಘದ ಸದಸ್ಯರು

ಕಾಲುವೆಯನ್ನು ತೆರವುಗೊಳಿಸಿದ ರೈತ ಸಂಘದ ಸದಸ್ಯರು

0

ಈಚೆಗೆ ಬಿದ್ದ ಮಳೆಗೆ ನೀರು ಕೆರೆ ಕಾಲುವೆಗಳಲ್ಲಿ ನೀರು ತುಂಬುತ್ತಿದೆ. ಆದರೆ ನಗರದ ಹೊರವಲಯದ ಅಮ್ಮನ ಕೆರೆ ಏರಿಯ ಮೇಲೆ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯಿಂದಾಗಿ ಕಾಲುವೆಯು ಮುಚ್ಚಿಹೋಗಿದ್ದು ಅದನ್ನು ತೆರವುಗೊಳಿಸಬೇಕೆಂದು ಶುಕ್ರವಾರ ರೈತ ಸಂಘದ ಮುಖಂಡರು ಒತ್ತಾಯಿಸಿದರು.
ತಾಲ್ಲೂಕಿನ ಹಂಡಿಗನಾಳ ಕ್ರಾಸ್ ನ ಸೇತುವೆ ಬಳಿ ರಂಗದಾಮ ಕಾಲುವೆಯನ್ನು ಹೆದ್ದಾರಿ ಕಾಮಗಾರಿ ಮಾಡುವಾಗ ಮುಚ್ಚಿ ಹೋಗಿದ್ದು ತರವುಗೊಳಿಸಲು ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಒತ್ತಾಯಿಸಿ ತಹಶಿಲ್ದಾರ್ ಅಜಿತ್ ಕುಮಾರ್ ರೈ ಅವರಿಗೆ ಸ್ಥಳವನ್ನು ತೋರಿಸಿ ವಿವರಿಸಿದರು. ತಕ್ಷಣ ಹೆದ್ದಾರಿ ಕಾಮಗಾರಿಯ ಎಂಜಿನಿಯರ್ ಅವರಿಗೆ ತಿಳಿಸಿ ಸ್ಥಳಕ್ಕೆ ಕರೆಸಿ ಅವರೊಂದಿಗೆ ಮಾತನಾಡಿ ಮುಚ್ಚಿದ್ದ ಕಾಲುವೆಯನ್ನು ತೆರವುಗೊಳಿಸಲಾಯಿತು.
ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಮುನಿನಂಜಪ್ಪ, ನಾರಾಯಣಸ್ವಾಮಿ, ರಾಮಕೃಷ್ಣಪ್ಪ, ದೇವರಾಜ್, ಪುಟ್ಟಮೂರ್ತಿ, ನರಸಿಂಹಮೂರ್ತಿ, ಹರೀಶ್ ಹಾಜರಿದ್ದರು.
 

error: Content is protected !!