Home News ಕಿಡಿಗೇಡಿಗಳ ದುಶ್ಕೃತ್ಯದಿಂದ ರೈತನಿಗೆ ನಷ್ಟ

ಕಿಡಿಗೇಡಿಗಳ ದುಶ್ಕೃತ್ಯದಿಂದ ರೈತನಿಗೆ ನಷ್ಟ

0

ತಾಲ್ಲೂಕಿನ ಜಂಗಮಕೋಟೆಯ ರೈತ ಗುಡಿಯಪ್ಪ ಅವರ ಹಿಪ್ಪುನೇರಳೆ ತೋಟಕ್ಕೆ ಬುಧವಾರ ಕಿಡಿಗೇಡಿಗಳು ಔಷಧಿ ಸಿಂಪಸಿದ್ದು, ಆ ಸೊಪ್ಪನ್ನು ತಿಂದ ರೇಷ್ಮೆ ಹುಳುಗಳು ಸತ್ತು ಸುಮಾರು ಒಂದು ಲಕ್ಷ ರೂಗಳಷ್ಟು ನಷ್ಟ ಸಂಭವಿಸಿದೆ.
ನಾನ್ನೂರು ಮೊಟ್ಟೆಯನ್ನು ಮೇಯಿಸಿದ್ದು, ನಾಲ್ಕು ಜ್ವರ ದಾಟಿ ನಾಲ್ಕು ದಿನಗಳಾಗಿದ್ದ ರೇಷ್ಮೆ ಹುಳುಗಳು ಎಲ್ಲವೂ ವಿಷವಾದ ಸೊಪ್ಪನ್ನು ತಿಂದು ಸತ್ತಿವೆ. ಕೈಗೆ ಬಂದಿದ್ದ ಬೆಳೆಯು ನೆಲಕಚ್ಚಿದ್ದರಿಂದಾಗಿ ರೈತರು ಕಂಗಾಲಾಗಿದ್ದಾರೆ. ರೇಷ್ಮೆ ಇಲಾಖೆಯ ಸಹನಿರ್ದೇಶಕ ಚಂದ್ರಪ್ಪ, ವಿಸ್ತರಣಾಧಿಕಾರಿ ತಿಮ್ಮರಾಜು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

error: Content is protected !!