ತಾಲ್ಲೂಕಿನ ಶೆಟ್ಟಿಹಳ್ಳಿಯಲ್ಲಿ ಗುರುವಾರ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಅಣಬೆ ಬೇಸಾಯದ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಸೂಕ್ಷ್ಮಾಣು ಜೀವಶಾಸ್ತ್ರದ ವಿಜ್ಞಾನಿ ಉಮಾಶಂಕರ್, ಗ್ರಾಮಸ್ಥರಿಗೆ ಅಣಬೆ ಬೇಸಾಯದ ಬಗ್ಗೆ ತಿಳಿಸಿಕೊಟ್ಟು ಅದರಿಂದ ಆಗುವ ಆರ್ಥಿಕ ಲಾಭಗಳ ಬಗ್ಗೆ ಹೇಳಿದರು.
ಅನುವಂಶೀಯಶಾಸ್ತ್ರದ ವಿಜ್ಞಾನಿ ಮಾರಪ್ಪ ರೈತರಿಗೆ ವಿವಿಧ ತಳಿಗಳ ಬಗ್ಗೆ ತಿಳಿಸಿಕೊಟ್ಟರು. ಸ್ಥಳೀಯ ಹವಾಮಾನಕ್ಕೆ ವಾತಾವರಣಕ್ಕೆ ಹೊಂದಿಕೊಳ್ಳುವ ತಳಿಗಳ ಬಗ್ಗೆ ಮಾಹಿತಿ ನೀಡಿದರು.
ತಾಲ್ಲೂಕು ರೈತಸಂಘದ ಅಧ್ಯಕ್ಷ ರವಿಪ್ರಕಾಶ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಚಂದ್ರಪ್ಪ, ವಿದ್ಯಾರ್ಥಿಗಳಾದ ಚಂದ್ರಮನು, ಅಪೂರ್ವರಾಜ್, ಅಮೃತ, ಆಶ, ಐಶ್ವರ್ಯ, ಅನುಷ, ಬದ್ರುನಿಸ, ಭರತ್, ಆನಂದ್, ಅವಿನಾಶ್, ಅಕ್ಷಯ್ಕುಮಾರ್, ಬಸವರಾಜ್, ಆದರ್ಶ್ ಹಾಜರಿದ್ದರು.