ತಾಲ್ಲೂಕಿನ ಕೊತ್ತನೂರು ಗ್ರಾಮದಲ್ಲಿ ಗ್ರಾಮ ದೇವರುಗಳಾದ ಕರಗದಮ್ಮ, ಮುನೇಶ್ವರ, ನಲ್ಲಪ್ಪ, ಗಂಗಮ್ಮ, ಎಲ್ಲಮ್ಮದೇವಿಯ ಜಾತ್ರಾ ಮಹೋತ್ಸವವನ್ನು ಸೋಮವಾರ ನಡೆಸಲಾಯಿತು.
ಪುರಾತನ ಮುನೇಶ್ವರ ಸ್ವಾಮಿ ದೇವಸ್ಥಾನದಿಂದ ಮಹಿಳೆಯರಿಂದ ದೀಪಗಳ ಮೆರವಣಿಗೆಯನ್ನು ನಡೆಸಲಾಯಿತು. ಹಲಗೆ ವಾದ್ಯದ ವಾದನದೊಂದಿಗೆ ದೇವರ ಉತ್ಸವ ಮೂರ್ತಿಗಳ ಜೊತೆಯಲ್ಲಿ ಕರಗವೂ ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು.
ಸಂಪತ್ ಕುಮಾರ್, ನಾಗರೆಡ್ಡಿ, ಶ್ರೀಧರ್, ಸುಬ್ಬಣ್ಣ, ಮುನಿರೆಡ್ಡಿ, ಬಚ್ಚಪ್ಪ ಹಾಜರಿದ್ದರು.