Home News ಕೊರೋನಾ ಎಫೆಕ್ಟ್ – ಏಕರೂಪ ನೀತಿ ಅಳವಡಿಕೆಗೆ ರೀಲರುಗಳ ಒತ್ತಾಯ

ಕೊರೋನಾ ಎಫೆಕ್ಟ್ – ಏಕರೂಪ ನೀತಿ ಅಳವಡಿಕೆಗೆ ರೀಲರುಗಳ ಒತ್ತಾಯ

0

ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಬುಧವಾರ ಕೊರೋನಾ ಸೋಂಕಿನ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಅವರಿಗೆ ರೀಲರುಗಳು ಮಾರುಕಟ್ಟೆಯ ವ್ಯವಹಾರದಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
“ಅತ್ಯಂತ ದೊಡ್ಡ ರೇಷ್ಮೆ ಗೂಡಿನ ಮಾರುಕಟ್ಟೆ ನಮ್ಮದು. ಆಂಧ್ರ, ಕರ್ನಾಟಕದ ಹಲವಾರು ಜಿಲ್ಲೆಗಳು, ಮಡಕಶಿರ, ಹಿಂದುಪುರ, ಕದಿರಿ, ಅನಂತಪುರ ಮುಂತಾದ ಕಡೆಗಳಿಂದ ರೇಷ್ಮೆ ಗೂಡು ಬರುತ್ತದೆ. ಇದುವರೆಗೂ ಯಾವುದೇ ಖಾಯಿಲೆ, ಸೋಂಕು ನಮ್ಮಲ್ಲಿ ಪತ್ತೆ ಆಗಿಲ್ಲ. ರೇಷ್ಮೆ ಗೂಡಿನ ಮಾರುಕಟ್ಟೆಯ ಉಪನಿರ್ದೇಶಕರು ಆಂಧ್ರದ ಗೂಡು ಬರಬಾರದು, ಬೇರೆ ಕಡೆಯವರು ಅಲ್ಲಿಯೇ ಮಾರಿಕೊಳ್ಳಿ ಅನ್ನುತ್ತಿದ್ದಾರೆ. ಬೇರೆಡೆಯಿಂದ ಬಂದು ನಮ್ಮ ರೈತರ ಹೆಸರಿನಲ್ಲಿ ರೇಷ್ಮೆ ಗೂಡನ್ನು ಮಾರಿದರೆ ಕಂಡು ಹಿಡಿಯುವುದು ಹೇಗೆ.
ನಮ್ಮ ತಾಲ್ಲೂಕಿನ ರೈತರು ನಮ್ಮ ಮಾರುಕಟ್ಟೆಗೆ ಬರುವುದಿಲ್ಲ. ನೇರವಾಗಿ ರೀಲರುಗಳ ಮನೆಗಳಿಗೆ ಹೋಗಿ ಮಾರಿಬಿಡುತ್ತಾರೆ. ಈಗ ಮಾರುಕಟ್ಟೆಗೆ ಬರುತ್ತಿರುವುದೇ ಹೊರ ಜಿಲ್ಲೆ ಹಾಗೂ ರಾಜ್ಯದ ರೇಷ್ಮೆ ಗೂಡು. ಅದನ್ನು ನಿಲ್ಲಿಸಿದರೆ ಹೇಗೆ. ಬಂದರೆ ಎಲ್ಲಾ ಕಡೆಯಿಂದಲೂ ರೇಷ್ಮೆ ಗೂಡು ಬರಲಿ, ಇಲ್ಲದಿದ್ದರೆ ಮಾರುಕಟ್ಟೆಯನ್ನೇ ತಾತ್ಕಾಲಿಕವಾಗಿ ಮುಚ್ಚಿಬಿಡಿ” ಎಂದು ರೀಲರುಗಳು ಒತ್ತಾಯಿಸಿದರು.

error: Content is protected !!