Home News ಗ್ರಾಮ ಪಂಚಾಯತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ

ಗ್ರಾಮ ಪಂಚಾಯತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ

0

ಗ್ರಾಮ ಪಂಚಾಯತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಕೆಲವು ಪ್ರಭಾವಿಗಳು ಕಂಟಕಪ್ರಾಯರಾಗಿದ್ದು, ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಂಡಿರುವ ಪಂಚಾಯತಿಯಲ್ಲಿ ಜಲಗಾರನ್ನು ತೆಗೆಯುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ಕುಂದಲಗುರ್ಕಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎನ್.ಆಂಜಿನಪ್ಪ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಪಂಚಾಯತಿ ಕೊಳವೆ ಬಾವಿಯ ಪೈಪ್ ಲೈನ್ಗೆ ಸಂಪರ್ಕ ಹಾಕಿಕೊಂಡಿರುವ ಸೊಣ್ಣೇಗೌಡ ಎಂಬುವರ ವಿಚಾರದಲ್ಲಿ ಗ್ರಾಮ ಪಂಚಾಯತಿಯ ಸಭೆಯಲ್ಲಿ ಚರ್ಚಿಸಿ 5 ಸಾವಿರ ರೂಗಳ ದಂಡ ವಿಧಿಸಲಾಗಿತ್ತು. ಜಲಗಾರ ಪ್ರಕಾಶ್ ಅವರಿಗೆ ಈ ರೀತಿಯ ಘಟನೆ ಮರುಕಳಿಸದಂತೆ ತಾಕೀತು ಮಾಡಲಾಗಿತ್ತು. ಆದರೆ ವೈಯಕ್ತಿಯ ಕಾರಣಗಳನ್ನಿಟ್ಟುಕೊಂಡು ಕೆಲವರು ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ದಿಗ್ಭಂದನೆ ಹಾಕಿ ಜಲಗಾರನನ್ನು ಅಮಾನತ್ತು ಗೊಳಿಸಲು ಒತ್ತಡ ಹೇರಿದ್ದಾರೆ. ಜಲಗಾರ ಕೆಲಸ ನಿರ್ವಹಿಸದಂತೆ ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆ ನಾವು ಕಾರ್ಯನಿರ್ವಾಹಣಾಧಿಕಾರಿಗಳಿಗೆ ದೂರು ನೀಡಿದ್ದೇವೆ.
ಕಳೆದ ಅವಧಿಯಲ್ಲಿ ಕಳಪೆ ಗುಣಮಟ್ಟದ ಮೋಟರ್ ಪಂಪ್ ಅಳವಡಿಸುವ ಮೂಲಕ ಪಂಚಾಯತಿಯಲ್ಲಿ ನೀರು ಸರಬರಾಜು ಸ್ಥಗಿತಗೊಂಡಿತ್ತು. ಸುಮಾರು 8 ರಿಂದ 10 ಲಕ್ಷ ರೂಗಳಷ್ಟು ಟ್ಯಾಂಕರ್ ನೀರಿಗೆಂದು ಖರ್ಚು ತೋರಿಸಿ ಅವ್ಯವಹಾರ ನಡೆಸಿದ್ದಾರೆ. ನಮ್ಮ ಅವಧಿಯಲ್ಲಿ ಗುಣಮಟ್ಟದ ಮೋಟರ್ ಪಂಪ್ ಅಳವಡಿಸಿದೆವು. ಈಗ ನಮ್ಮಲ್ಲಿ ನೀರಿನ ಸಮಸ್ಯೆಯೇ ಇಲ್ಲ. ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಮಾಡುವ ಮೂಲಕ ಕೆಲ ಮುಖಂಡರು ತಮ್ಮ ಹತಾಶೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಗ್ರಾಮ ಪಂಚಾಯತಿ ಸದಸ್ಯ ಕೆ.ಎಂ.ಅಂಬರೀಷ, ಮಾಜಿ ಸದಸ್ಯರಾದ ಮುನಿರಾಜು, ಜಿ.ಟಿ.ನಾರಾಯಣಸ್ವಾಮಿ, ಕೆ.ಮುನಿಯಪ್ಪ, ಪ್ರಸನ್ನ, ಗಂಗಯ್ಯ ಈ ಸಂದರ್ಭದಲ್ಲಿ ಹಾಜರಿದ್ದರು.