Home News ಛತ್ರಪತ್ರಿ ಶಿವಾಜಿ ಹಾಗೂ ವರಕವಿ ಸರ್ವಜ್ಞ ಅವರ ಜಯಂತ್ಯುತ್ಸವ

ಛತ್ರಪತ್ರಿ ಶಿವಾಜಿ ಹಾಗೂ ವರಕವಿ ಸರ್ವಜ್ಞ ಅವರ ಜಯಂತ್ಯುತ್ಸವ

0

ದಾಸ್ಯಮುಕ್ತ ಭಾರತ ದೇಶಕ್ಕಾಗಿ ನಿರಂತರವಾಗಿ ಹೋರಾಟಗಳನ್ನು ನಡೆಸಿದ ಛತ್ರಪತಿ ಶಿವಾಜಿಯವರ ಹೋರಾಟ ಮನೋಭಾವನೆ ಪ್ರತಿಯೊಬ್ಬ ಯುವಜನತೆಗೆ ಬರಬೇಕು ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಹೇಳಿದರು.
ನಗರದ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಛತ್ರಪತಿ ಶಿವಾಜಿ ಹಾಗೂ ಕವಿ ಸರ್ವಜ್ಞ ಕವಿಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತ ದೇಶದ ಮೇಲೆ ನಡೆಯುತ್ತಿದ್ದ ದಾಳಿ ಮತ್ತು ದೌರ್ಜನ್ಯಗಳಿಗೆ ನಲುಗಬೇಕಾದಂತಹ ಪರಿಸ್ಥಿತಿ ಉಂಟಾಗಿತ್ತು, ಅದನ್ನು ಎದುರಿಸಿದ ವೀರ ಶಿವಾಜಿ. ದೇಶದ ವಿವಿಧ ದಾರ್ಶನಿಕರು, ಸಾಹಿತಿಗಳು, ದಾಸರುಗಳ ಜನ್ಮದಿನಾಚರಣೆಗಳನ್ನು ಮಾಡುವ ಮೂಲಕ ಅವರ ಆದರ್ಶಗಳನ್ನು ಯುವಜನತೆಗೆ ತಿಳಿಸಬೇಕಾಗಿದೆ, ಧರ್ಮನಿಷ್ಟೆ, ಭಕ್ತಿ, ಸದಾಚಾರ, ಸುಶೀಲ, ಮುಂತಾದ ಸದ್ಗುಣಗಳಿಂದ ಮಾತ್ರವಲ್ಲದೆ ಸ್ವರಾಜ್ಯಕ್ಕಾಗಿ ಪೋಷಕವೆನಿಸುವ ಪ್ರತಿಯೊಂದು ಅಂಶದ ಕಡೆಗೆ ಶಿವಾಜಿಯವರು ಬದ್ಧರಾಗಿದ್ದರು. ಅವರು ಕೊಡಿಸಿಕೊಟ್ಟ ಸ್ವರಾಜ್ಯಕ್ಕೆ ದಕ್ಕೆ ಬಾರದಂತೆ ಕಾಪಾಡಿಕೊಳ್ಳಬೇಕಾದಂತಹ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನ ಮೇಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಮಾತನಾಡಿ, ಛತ್ರಪತಿ ಶಿವಾಜಿಯವರು ಹಿಂದುಧರ್ಮವನ್ನು ಉಳಿಸುವ ನಿಟ್ಟಿನಲ್ಲಿ ನಡೆಸಿದ ಹೋರಾಟಗಳು ಮಹತ್ತರವಾದದ್ದು, ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ, ಸರ್ವಜ್ಞರು ಕೂಡಾ ತನ್ನ ವಚನ ಸಾಹಿತ್ಯ ಮೂಲಕ ಪಡೆದ ಹೆಗ್ಗಳಿಕೆ ನಾಡಿನ ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆಪಡುವಂತಹ ವಿಚಾರವಾಗಿದೆ, ಎಲ್ಲಾ ಕಾಲಗಳಿಗೂ ಅನ್ವಯವಾಗುವಂತಹ ಎಲ್ಲರಿಗೂ ಸರಳಭಾಷೆಯಲ್ಲಿ ಅರ್ಥವಾಗುವಂತಹ ರೀತಿಯಲ್ಲಿ ರಚಿಸಿದ ವಚನಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಗುರುಬಸಪ್ಪ, ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ವಿಭಾಗದ ಎಇಇ ಶಿವಾನಂದ, ತೋಟಗಾರಿಕಾ ಸಹಾಯಕ ನಿರ್ದೇಶಕ ಎನ್.ಆನಂದ್, ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಲಿಯಾಖತ್ಉಲ್ಲಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಗುರುರಾಜ್, ಉಪನೊಂದಣಾಧಿಕಾರಿ ಶ್ರೀನಿವಾಸ್, ಅಬಕಾರಿ ನಿರೀಕ್ಷಕ ನಾಗೇಂದ್ರಸಿಂಗ್, ರಾಜಸ್ವ ನಿರೀಕ್ಷಕ ಸುಭ್ರಮಣ್ಯಂ, ಗ್ರಾಮಲೆಕ್ಕಾಧಿಕಾರಿಗಳಾದ ಲಾರೆನ್ಸ್, ಆನಂದ್, ಮುನಿಶಾಮಯ್ಯ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.