Home News ಜಮೀನು ಮಂಜೂರು ವಿಳಂಬ, ಧರಣಿ ಕುಳಿತ ನಿವೃತ್ತ ಸೈನಿಕ

ಜಮೀನು ಮಂಜೂರು ವಿಳಂಬ, ಧರಣಿ ಕುಳಿತ ನಿವೃತ್ತ ಸೈನಿಕ

0

ಜಮೀನು ಮಂಜೂರು ಮಾಡಲು ವಿಳಂಬ ಮಾಡುತ್ತಿರುವ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ಬುಧವಾರ ಅನಿರ್ಧಿಷ್ಟ ಧರಣಿಯನ್ನು ನಿವೃತ್ತ ಸೈನಿಕ ಆರ್ ವಿ ಮಂಜುನಾಥ್ ಆರಂಭಿಸಿದ್ದಾರೆ.
ಸೈನಿಕನಾಗಿ ಸರ್ಕಾರದಿಂದ ಜಮೀನು ಮಂಜೂರಾತಿಗಾಗಿ ೨೦೦೫ರಲ್ಲಿ ಅರ್ಜಿ ಸಲ್ಲಿಸಿದ್ದು ಹದಿನಾಲ್ಕು ವರ್ಷಗಳು ಕಳೆದರೂ ಇದುವರೆಗೂ ಜಮೀನು ಮಂಜೂರು ಮಾಡಿಲ್ಲ ಎಂದು ದೂರಿದರು
೨೦೧೦ರಲ್ಲಿ ಆಗಿನ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳು ಶಿಡ್ಲಘಟ್ಟ ತಹಶೀಲ್ದಾರರಿಗೆ ಪತ್ರ ಬರೆದು ತಾಲ್ಲೂಕು ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಗುರುತಿಸಿ ಮಂಜೂರು ಮಾಡುವಂತೆ ಆದೇಶಿಸಿದ್ದರು. ಅಂದಿನಿಂದ ಇದುವರೆಗೂ ಸಾಕಷ್ಟು ಬಾರಿ ಕಚೇರಿಗಳಿಗೆ ಆಲೆದಿದ್ದೇನೆ ಆದರೂ ಜಮೀನು ಮಂಜೂರಾಗಿಲ್ಲ. ವಿಧಿಯಿಲ್ಲದೆ ಧರಣಿ ಕುಳಿತಿದ್ದೇನೆ ಎಂದು ಅಳಲು ತೋಡಿಕೊಂಡರು.

error: Content is protected !!