Home News ತಾಲ್ಲೂಕಿನ ವಿವಿದೆಡೆ ಅಪಘಾತ, ಮೂವರ ಸಾವು

ತಾಲ್ಲೂಕಿನ ವಿವಿದೆಡೆ ಅಪಘಾತ, ಮೂವರ ಸಾವು

0

ತಾಲ್ಲೂಕಿನ ವಿವಿದೆಡೆ ಭಾನುವಾರ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಮೂರೂ ಪ್ರತ್ಯೇಕ ಪ್ರಕರಣಗಳೂ ಸಹ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿವೆ.
ಶಿಡ್ಲಘಟ್ಟ-ದಿಬ್ಬೂರಹಳ್ಳಿ ಮಾರ್ಗ ಕೋಟಹಳ್ಳಿ ಬಳಿ ನಡೆದ ಟ್ರ್ಯಾಕ್ಟರ್ ಪಲ್ಟಿಯಲ್ಲಿ ಭಕ್ತರಹಳ್ಳಿಯ ಶಿವಮೂರ್ತಿ ಮೃತಪಟ್ಟಿದ್ದಾನೆ. ವೈ.ಹುಣಸೇನಹಳ್ಳಿ ಬಳಿ ಬಾವಿಯೊಂದರಲ್ಲಿ ಬಿದ್ದ ಬೈಕ್ ಸವಾರ ನಾರಾಯಣಸ್ವಾಮಿ ಮೃತಪಟ್ಟಿದ್ದಾನೆ. ಹಾಗೆಯೆ ಜಂಗಮಕೋಟೆ ಬಳಿ ನಡೆದ ಬೈಕ್ ಅಪಘಾತದಲ್ಲಿ ಜಂಗಮಕೋಟೆಯ ಅಬ್ದುಲ್ ಬಾಸಿದ್ ಮೃತಪಟ್ಟಿದ್ದಾರೆ.
ಅಪಘಾತ ನಡೆದ ಮೂರು ಕಡೆಗೂ ಡಿವೈಎಸ್ಪಿ ಕೃಷ್ಣಮೂರ್ತಿ, ಸಿಪಿಐ ವೆಂಕಟೇಶ್, ಗ್ರಾಮಾಂತರ ಠಾಣೆಯ ಎಸ್ಐ ಪ್ರದೀಪ್ ಪೂಜಾರಿ ಭೇಟಿ ಕೊಟ್ಟು ಪರಿಶೀಲಿಸಿದರು.
ಮೂರೂ ಪ್ರಕರಣಗಳನ್ನು ಪ್ರತ್ಯೇಕವಾಗಿ ದಾಖಲಿಸಕೊಂಡು ತನಿಖೆ ಆರಂಭಿಸಿದ್ದು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆದಿದ್ದು, ಶವಗಳನ್ನು ಸಂಬಂಧಿಸಿದ ಕುಟುಂಬದವರಿಗೆ ಹಸ್ತಾಂತರಿಸಿದರು.
ಒಂದೆ ದಿನ ಮೂವರು ಮೃತಪಟ್ಟಿದ್ದರಿಂದ ಅವರ ಕುಟುಂಬದ ಸದಸ್ಯರು, ಬಂಧು ಬಳಗ, ಸ್ನೇಹಿತರು ಜಮಾಯಿಸಿದ್ದರಿಂದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜನಜಂಗುಳಿ ನೆರೆದಿತ್ತಲ್ಲದೆ ಕುಟುಂಬದವರ ರೋಧನ ಮುಗಿಲು ಮುಟ್ಟಿತ್ತು.