ದೇಶದ ಬಹುಷ್ಯ ಶಿಕ್ಷಕರ ಕೈಯಲ್ಲಿದ್ದು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದ್ದು ಈ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕೆಂದು ಕ್ಷೇತ್ರದ ಶಾಸಕ ಎಂ.ರಾಜಣ್ಣ ಹೇಳಿದರು.
ನಗರದ ಕೋಟೆ ಬಾಲಕರ ಶಾಲೆಯ ಆವರಣದಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಚೇರಿ ಉದ್ಘಾನೆ ಹಾಗೂ ದಿನಚರಿ2015 ಬಿಡುಗಡೆ ಮಾಡಿ ಮಾತನಾಡಿದ ಅವರು ಉತ್ತಮ ಸಮಾಜ ನಿರ್ಮಾಣ ಮಾಡಬೇಕಾದರೆ ಶಿಕ್ಷಕರ ಪಾತ್ರ ಮುಖ್ಯವಾಗಿದ್ದು ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ಆದ್ದರಿಂದ ಮಕ್ಕಳನ್ನು ಬಾಲ್ಯದಿಂದಲೆ ಉತ್ತಮ ಪ್ರಜೆಗಳಾಗುವಂತೆ ರೂಪಿಸಬೆಕಾದ ಕರ್ತವ್ಯ ಶಿಕ್ಷಕರದಗಿದ್ದು ಕಾಯಾವಾಚಮನುಸ ಎಂಬಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕೆಂದರು.
ಶಿಕ್ಷಕರ ಪಿತಾಮಹ ಶಿಕ್ಷಣ ತಜ್ಞ ತತ್ವಜ್ಯಾನಿ ಸರ್ವಪಲ್ಲಿ ರಾಧಾಕೃಷ್ಣನ್ ರವರ ಆದರ್ಶಗಳನ್ನು ಶಿಕ್ಷಕರು ಪಾಲಿಸಬೇಕೆಂದರಲ್ಲದೆ ಶಿಕ್ಷಕರ ಭವನ ಶೀಘ್ರದಲ್ಲೆ ನಿರ್ಮಾಣ ಮಾಡಲು ಶ್ರಮಿಸುವುದಾಗಿ ಬರವಸೆ ನೀಡಿದರು.
ಮುಖ್ಯ ಅತಿಥಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾದ್ಯಕ್ಷ ಎ.ನಾರಯಣಸ್ವಾಮಿ ಮಾತನಾಡಿ ಶಾಲೆಗಳ ಮತ್ತು ಮಕ್ಕಳ ಆಭಿವೃದ್ದಿಯೇ ನಮ್ಮ ಮೂಲ ಉದ್ದೇಶ ವಾಗಿದ್ದು ಜಿಲ್ಲೆಯ ಸಮಸ್ಥ ಶಿಕ್ಷಕರ ಕ್ಷೇಮಾಬಿವೃದ್ದಿ ಕಾಪಾಡುವುದು ನಮ್ಮ ಸಂಘದ ಮೂಲದೆಯೆ ಆಗಿದೆ, ಅದೆ ರೀತಿ ಈ ವರ್ಷದಿಂದ ನಮ್ಮ ಸಂಘ ನೂತನವಾಗಿ ಮಾರ್ಚಿ ತಿಂಗಳಿನಿಂದ ಎಲ್ಲಾ ಶಿಕ್ಷಕರಿಗೆ ವೇತನ ಪ್ರಮಾಣ ಪತ್ರ ನೀಡಬೇಕೆಂದು ಸಂಘದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನು ಮತದಿಂದ ತೀರ್ಮಾನ ಮಾಡಿ ಅದರ ಜವಾಬ್ದಾರಿಯನ್ನು ತಾಲ್ಲೂಕು ಸಂಘಗಳು ಉಸ್ತುವಾರಿ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದ್ದೇವೆ ಇದರಿಂದ ಶಿಕ್ಷಕರು ಕಚೇರಿ ಬಳಿ ಬರುವ ವಾಡಿಕೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಕಾರ್ಯವನ್ನು ಕೈಗೊಂಡಿದ್ದೇವೆ ಮತ್ತು ಕಚೇರಿಗಳಲ್ಲಿ ಭಾಕಿ ಇರುವ 15,20,30 ಸೇವಾ ಆವಧಿಯ ಬಡ್ತಿಯ ಮೂಲ ಭಾಕಿವೆತನ ಶೀಘ್ರವಾಗಿ ಮಾಡಬೆಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಂಘದ ಪರವಾಗಿ ಮನವಿಯನ್ನು ಮಾಡಿದ್ದೇವೆ ಹಾಗೂ ಇಡೀ ಜಿಲ್ಲೆಯ ಶಿಕ್ಷಕರ ಕುಂದುಕೊರತೆಗಳನ್ನು ಹಂತಹಂತವಾಗಿ ನಾವು ಬಗೆಹರಿಸುವುದಾಗಿ ಭರವಸೆ ನೀಡಿದರು.
ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ವಿ.ಶ್ರೀರಾಮಯ್ಯ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಆವರು ಸಂಘದ ಸರ್ವತೋ ಮುಖ ಆಭಿವೃದ್ದಿಗೆ ಸದಾ ಶ್ರಮಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಹಿರಿಯ ಮುಖಂಡ ಮೇಲೂರು ಸೂರ್ಯನಾರಾಯಣಗೌಡ, ಸಂಘದ ಸಂಘಟನಾ ಕಾಂiÀi ್ದರ್ಶಿಗಳಾದ ಸಿ.ವಿ.ವೆಂಕಟರಾಯಪ್ಪ, ರಾಮಚಂದ್ರಪ್ಪ, ಗೌರವ ಆದ್ಯಕ್ಷ ಸಿ.ಎಂ.ಮುನಿರಾಜು ಚಿಂತಾಮಣಿ ತಾಲ್ಲೂಕು ಆದ್ಯಕ್ಷ ಆಶೋಕ್ ಕುಮಾರ್, ಪ್ರ.ಕಾ.ವಸಂತರೆಡ್ಡಿ, ರಾಜ್ಯ ಸಂಘದ ಸದಸ್ಯ ಚೌಡಪ್ಪ ಚಿಂತಾಮಣಿ, ಭಾಗೇಪಲ್ಲಿ ತಾಲ್ಲೂಕು ಅಧ್ಯಕ್ಷ ವೆಂಕಟರೊಣಪ್ಪ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಎನ್.ಕೆ.ಗುರುರಾಜ್ ರಾವ್, ಸ.ನೌ.ಸಂ.ಕಾರ್ಯದರ್ಶಿ ಅಕ್ಕಲರೆಡ್ಡಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಿಕ್ಷಕರ ಪ್ರತಿನಿಧಿ ಟಿ.ವಿಜಯಕುಮಾರ್, ಉಪಾದ್ಯಕ್ಷ ಎನ್.ರಾಮಚಂದ್ರಪ್ಪ, ತಾಲ್ಲೂಕು ಸಂಘದ ಕಾರ್ಯದರ್ಶಿ ಬಿ.ಅರ್.ನಾರಾಯಣಸ್ವಾಮಿ, ಟಿ.ವಿ.ನಾಗರಾಜ್, ಮಹಿಳಾ ಉಪಾದ್ಯಕ್ಷಣಿ ಅರುಣಾಚಂದ್ರಶೇಖರ, ಮಹಿಳಾ ಕಾರ್ಯದರ್ಶಿ ಆರ್.ವೇಣುಮಾದವಿ, ನಿವೃತ್ತ ಶಿಕ್ಷಕ ಚಿಕ್ಕಮುನಿಯಪ್ಪ, ಕೆಂಪೇಗೌಡ ಹಾಗೂ ಸಂಘದ ಸದಸ್ಯರು ಹಾಜರಿದ್ದರು.