Home News ದುಬಾರಿ ಹಣ ವಸೂಲಿ – ನಗರದ ಶ್ರೀ ವೆಂಕಟೇಶ್ವರ ಇಂಡೇನ್ ಗ್ಯಾಸ್ ಏಜೆನ್ಸಿಗೆ ಮುತ್ತಿಗೆ

ದುಬಾರಿ ಹಣ ವಸೂಲಿ – ನಗರದ ಶ್ರೀ ವೆಂಕಟೇಶ್ವರ ಇಂಡೇನ್ ಗ್ಯಾಸ್ ಏಜೆನ್ಸಿಗೆ ಮುತ್ತಿಗೆ

0

ಗ್ಯಾಸ್ ವಿತರಕರು ಗ್ರಾಹಕರಿಂದ ದುಬಾರಿ ಹಣವನ್ನು ವಸೂಲಿ ಮಾಡುತ್ತಿರುವುದರ ಜೊತೆಗೆ ಗ್ರಾಹಕರೊಂದಿಗೆ ದೌರ್ಜನ್ಯವಾಗಿ ವರ್ತಿಸುತ್ತಿದ್ದರೆಂದು ಆರೋಪಿಸಿ ನಗರದ ಶ್ರೀ ವೆಂಕಟೇಶ್ವರ ಇಂಡೇನ್ ಗ್ಯಾಸ್ ಏಜೆನ್ಸಿಯ ಕಚೇರಿಗೆ ಮುತ್ತಿಗೆ ಹಾಕಿದ ಪ್ರಸಂಗ ನಗರದಲ್ಲಿ ನಡೆಯಿತು.
12feb1aನಗರದ ಅಂಚೆ ಕಚೇರಿಯ ಬಳಿರುವ ಶ್ರೀ ವೆಂಕಟೇಶ್ವರ ಇಂಡೇನ್ ಗ್ಯಾಸ್ ಏಜೆನ್ಸಿಯ ಕಚೇರಿಗೆ ಬಂದ ಸಿಧ್ಧಾರ್ಥನಗರದ ನಿವಾಸಿಗಳು ಸಿಲಿಂಡರ್‍ನ ರೇಗ್ಯೂಲೇಟರ್ ಖರೀದಿ ಮಾಡಲು ಹೋದಾಗ 150 ರೂಪಾಯಿಗಳ ಬೆಲೆಯ ರೇಗ್ಯೂಲೇಟರ್‍ಗೆ 495 ರೂಪಾಯಿಗಳನ್ನು ಪಡೆದುಕೊಂಡು ರಸೀದಿಯನ್ನು ನೀಡದೆ, ವಂಚನೆ ಮಾಡಿರುತ್ತಾರೆ, ಸರ್ಕಾರದ ಆದೇಶದಂತೆ 150 ರೂಪಾಯಿಗಳನ್ನು ಮಾತ್ರ ಪಡೆಯಬೇಕು 495 ರೂಪಾಯಿಗಳನ್ನು ಯಾಕೆ ಪಡೆಯುತ್ತೀರಿ ಹಾಗಿದ್ದರೆ 495 ರೂಪಾಯಿಗಳಿಗೆ ನಮಗೆ ರಸೀದಿಯನ್ನು ನೀಡುವಂತೆ ಗ್ರಾಹಕರು ಕೇಳಿದಾಗ, ನಾವು ಪಡೆಯುವುದು ಅಷ್ಟೆ ಹಣ, ನಿಮಗಿಷ್ಟವಿದ್ದರೆ ತೆಗೆದುಕೊಳ್ಳಿ ಇಲ್ಲವಾದರೆ ಬೇರೆ ಎಲ್ಲಿಯಾದರೂ ತೆಗೆದುಕೊಳ್ಳಿ, ಬಿಲ್ ಕೊಡಬೇಕಾದರೆ ಮಧ್ಯಾಹ್ನ 03 ಘಂಟೆಗೆ ಬನ್ನಿ ಎಂದು ಏಜೆನ್ಸಿಯ ಮಾಲೀಕ ನಾಗರಾಜು, ಬೇಜಾವಾಬ್ದಾರಿಯಿಂದ ಉತ್ತರಿಸುತ್ತಾರೆ, ನೂತನವಾಗಿ ಅನಿಲ ಸಂಪರ್ಕವನ್ನು ಪಡೆಯಬೇಕಾದರೆ 5 ಸಾವಿರದಿಂದ 6 ಸಾವಿರ ರೂಪಾಯಿಗಳವರೆಗೂ ಹಣವನ್ನು ಪಡೆದುಕೊಳ್ಳುತ್ತಾರೆ, ಆನ್‍ಲೈನ್‍ನಲ್ಲಿ ಸಿಲಿಂಡರ್ ಬುಕ್ ಮಾಡಿದ ನಂತರ ಮೊಬೈಲ್‍ಗಳಲ್ಲಿ ಮೆಸೆಜ್ ಬಂದರೂ ಕೂಡಾ ಸರಿಯಾದ ಸಮಯಕ್ಕೆ ಸಿಲಿಂಡರ್‍ಗಳನ್ನು ವಿತರಣೆ ಮಾಡದೆ ಗ್ರಾಹಕರನ್ನು ವಂಚಿಸಲಾಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಈ ಬಗ್ಗೆ ಏಜೆನ್ಸಿಯ ಮಾಲೀಕ ನಾಗರಾಜು ಅವರನ್ನು ಪ್ರಶ್ನಿಸಿದಾಗ ನಾವು ರೇಗ್ಯೂಲೇಟರ್‍ಗೆ ಪಡೆಯುತ್ತಿರುವುದು, 150 ರೂಪಾಯಿಗಳು ಮಾತ್ರ, ಅವರು ರೇಗ್ಯೂಲೇಟರ್ ತೆಗೆದುಕೊಂಡು 500 ರೂಪಾಯಿಗಳನ್ನು ಕೊಟ್ಟಿದ್ದಾರೆ, ಅವರಿಗಿನ್ನು ಚಿಲ್ಲರೆ ಕೊಟ್ಟಿಲ್ಲ, ಅಷ್ಟರಲ್ಲಿ ಈ ರೀತಿಯಾಗಿ ಗಲಾಟೆ ಮಾಡುತ್ತಿದ್ದಾರೆ, ಕಳೆದ ಕೆಲವು ದಿನಗಳ ಹಿಂದೆ ಮದುವೆಗೆ ಗ್ಯಾಸ್ ಸಿಲಿಂಡರ್ ನೀಡುವಂತೆ ಕೇಳಿದ್ದರು, ಸಿಲಿಂಡರ್ ನೀಡಲಿಲ್ಲವೆಂಬ ಕಾರಣಕ್ಕೆ ಈ ರೀತಿ ಗಲಾಟೆ ಮಾಡುತ್ತಿದ್ದಾರೆ ಎಂದು ಉತ್ತರಿಸಿದರು.