Home News ನಗರದ ಜೌಗುಪೇಟೆಯಲ್ಲಿ ಪರಿಸರ ಗಣಪ

ನಗರದ ಜೌಗುಪೇಟೆಯಲ್ಲಿ ಪರಿಸರ ಗಣಪ

0

ನಗರದ ಜೌಗುಪೇಟೆಯಲ್ಲಿ ಕೆಲವು ಯುವಕರು ಸೇರಿಕೊಂಡು ಪರಿಸರ ಪ್ರೇಮಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಸಂಪೂರ್ಣ ಮಣ್ಣಿನಲ್ಲಿ ತಯಾರಾದ, ಕೃತಕ ಬಣ್ಣವೂ ಇಲ್ಲದ ಅಪ್ಪಟ ಪರಿಸರ ಪ್ರೇಮಿ ಗಣೇಶನನ್ನು ಪೂಜೆ ಮಾಡುತ್ತಿರುವುದಲ್ಲದೆ, ಪ್ರಸಾದ ವಿತರಿಸಲು ಅಡಿಕೆಯ ತಟ್ಟೆಗಳನ್ನು ಬಳಸುತ್ತಾ, ಪರಿಸರಕ್ಕೆ ಹಾನಿಯಾಗದಂತೆ ಗಣೇಶೋತ್ಸವದ ಆಚರಣೆ ನಡೆಸಿದ್ದಾರೆ. ಯುವಕರಾದ ಮಿಥುನ್‌, ವಿನಯ್‌, ಗೌತಮ್‌, ನವೀನ್‌, ರಾಕೇಶ್‌, ಮಂಜೇಶ್‌ ಮತ್ತು ಮೋನಿಶ್‌, ಗಣಪತಿಯನ್ನು ಪರಿಸರಕ್ಕೆ ಹಾನಿಮಾಡದಂತೆ ಪೂಜೆ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

error: Content is protected !!