Home News ನಗರದ ಬೈಪಾಸ್ ರಸ್ತೆಯಲ್ಲಿದ್ದ ಬೋರ್‍ವೆಲ್ ನಾಶ

ನಗರದ ಬೈಪಾಸ್ ರಸ್ತೆಯಲ್ಲಿದ್ದ ಬೋರ್‍ವೆಲ್ ನಾಶ

0

ನಗರದ ಬೈಪಾಸ್ ರಸ್ತೆಯಲ್ಲಿ ನಿನ್ನೆ ಸಂಜೆ ಬೋರ್‍ವೆಲ್ ಮತ್ತು ಪೈಪ್‍ಲೈನ್ ನಾಶಪಡಿಸಿರುವ ಘಟನೆ ನಡೆದಿದೆ.
ನಗರದ ಬೈಪಾಸ್ ರಸ್ತೆಯಲ್ಲಿರುವ ಸರ್ವೆ ನಂ 541/1, ಹಾಗೂ 542 ರಲ್ಲಿ ಕೊರೆಸಿದ್ದ ಬೋರ್‍ವೆಲ್ ಹಾಗೂ ಹಿಪ್ಪುನೇರಳೆ ಗಿಡಕ್ಕೆ ಅಳವಡಿಸಿದ್ದ ಪೈಪ್‍ಲೈನ್‍ನ್ನು ನಾಶಪಡಿಸಿರುವ ಘಟನೆಗೆ ಸಂಬಂಧಿಸಿದಂತೆ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಬೈಪಾಸ್ ರಸ್ತೆಯಲ್ಲಿರುವ ಸರ್ವೆ ನಂ 541/1, ಹಾಗೂ 542 ರಲ್ಲಿ ಕೊರೆಸಿದ್ದ ಬೋರ್‍ವೆಲ್ ಹಾಗೂ ಹಿಪ್ಪುನೇರಳೆ ಗಿಡಕ್ಕೆ ಅಳವಡಿಸಿದ್ದ ಪೈಪ್‍ಲೈನ್‍ನ್ನು ನಾಶಪಡಿಸಿರುವುದು.

ಕಳೆದ ಒಂದು ವರ್ಷ ಆರು ತಿಂಗಳ ಹಿಂದೆ ಜಯರಾಮ ಬಿನ್ ದೊಡ್ಡಕೆಂಪಣ್ಣ 17 ಕುಂಟೆ ಜಮೀನನ್ನು ನಗರದ ವಾಸಿಗಳಾದ ಕುರುಬರಪೇಟೆಯ ಅನಿಲ್ ಕುಮಾರ್ ಎಂಬುವವರು ಖರೀದಿಸಿ, ಬೋರ್‍ವೆಲ್ ಕೊರೆಸಿದ್ದು, ಹಿಪ್ಪುನೇರಳೆ ಗಿಡ ಹಾಕಿ ಜೀವನ ಸಾಗಿಸುತ್ತಿದ್ದು, ಜಮೀನಿನ ಪಕ್ಕದಲ್ಲೇ ವಾಸವಾಗಿರುವ ರಾಜ್‍ಕುಮಾರ್ ಅವರು ನಮಗೆ ಎರಡು ಕುಂಟೆ ಜಮೀನು ಬೇಕೆಂದು ಕೇಳಿದ್ದು, ಕೊಡಲು ಒಪ್ಪದ ಕಾರಣ ರಾಜ್‍ಕುಮಾರ್ ಮಕ್ಕಳು ಬೋರ್‍ವೆಲ್ ಹಾಗೂ ಪೈಪ್‍ಲೈನ್‍ನ್ನು ಒಡೆದು ನಾಶಪಡಿಸಿದ್ದು, ಬೆಳೆ ಹಾಗೂ ಬೋರ್‍ವೆಲ್ ಹಾಗೂ ಪೈಪ್‍ಲೈನ್ ನಾಶಪಡಿಸಿರುವ ಬಗ್ಗೆ ನಗರ ಪೊಲಿಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ಜಮೀನಿನ ಮಾಲಿಕ ಅನಿಲ್ ಕುಮಾರ್ ತಂದೆ ಕೆ.ಎಂ.ಶ್ರೀನಿವಾಸಪ್ಪ ತಿಳಿಸಿದ್ದಾರೆ.
ಈ ಸಂಬಂದ ನಗರದ ಪೋಲಿಸ್ ಠಾಣೆಯಲ್ಲಿ ರಾಜ್‍ಕುಮಾರ್, ಅಣೆಪ್ಪ, ಶಶಿಕುಮಾರ್, ಅನಂತ, ಮದನ, ನವೀನ್, ಸುಬ್ರ್ಯಮಣಿ, ಮಂಜುಳಮ್ಮ, ಭಾರತಿ, ಮಂಜುನಾಥ್ ಇವರ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೋಲಿಸ್ ಮೂಲಗಳಿಂದ ತಿಳಿದುಬಂದಿದೆ.