Home News ನಗರಸಭೆಯ ನಿರ್ಲಕ್ಷ

ನಗರಸಭೆಯ ನಿರ್ಲಕ್ಷ

0

ಆಂಕರ್ ಪಾರ್ಟ್: ಶಿಡ್ಲಘಟ್ಟ ನಗರದ 2ನೇ ವಾರ್ಡಿನ ಮನೆಯೊಂದರ ಕುಡಿಯುವ ನೀರಿನ ಶೇಖರಣೆ ತೊಟ್ಟಿಗೆ ನಗರಸಭೆ ವತಿಯಿಂದ ಅಳವಡಿಸಿರುವ ನೀರಿನ ಕೊಳವೆ ಒಡೆದು ಚರಂಡಿ ನೀರು ಸರಬರಾಜು ಆಗುತ್ತಿದ್ದು ನಗರಸಭೆಯ ನಿರ್ಲಕ್ಷದ ವಿರುದ್ದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈ.ಓ: ನಗರದ 2ನೇ ವಾರ್ಡಿನ ನಿವಾಸಿ ಆಂಜಿನಪ್ಪ ಮನೆಯ ಕುಡಿಯುವ ನೀರಿನ ಶೇಖರಣೆ ತೊಟ್ಟಿಗೆ ಕಲುಷಿತ ಚರಂಡಿ ನೀರು ಸರಬರಾಜು ಆಗುತ್ತಿದ್ದು ಇದರ ಬಗ್ಗೆ ನಗರಸಭೆಗೆ ಮತ್ತು ವಾರ್ಡಿನ ಸದಸ್ಯರಿಗೆ ಮಾಹಿತಿ ಕೊಟ್ಟಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ ಮನೆಯಲ್ಲಿ ಎಲ್ಲಾ ತುಂಬಾ ಕೆಟ್ಟವಾಸನೆ ಬರುತ್ತಿದ್ದು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ. ಎಂದು ದೂರಿದ ನಿವಾಸಿ ಆಂಜಿನಪ್ಪ ನಗರಸಭೆಯ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಬೇಕೆಂದು ಒತ್ತಾಯಿಸಿದರು.
ಈ ಭಾಗದಲ್ಲಿ ನೀರಿನ ಸಮಸ್ಯೆಯು ಹೆಚ್ಚಾಗಿದ್ದು ನೀರಿನ ಬವಣೆಯನ್ನು ನೀಗಿಸಬೇಕಾದ ನಗರಸಭೆಯು ಇಂತಹ ಘಟನೆಗಳು ನಡೆಯುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳದಿರುವದು ನಗರಸಭೆಯ ನಿರ್ಲಕ್ಷತನವನ್ನು ತೋರಿಸುತ್ತದೆ ಎಂದು ಇಲ್ಲಿನ ನಿವಾಸಿಗಳು ದೂರಿದ್ದಾರೆ.
ಬೈಟ್1: ಆಂಜಿನಪ್ಪ ಮನೆಯ ಮಾಲಿಕ.
ಬೈಟ್2: ಶೈಲಜ ಪಕ್ಕದ ಮನೆಯ ನಿವಾಸಿ.

error: Content is protected !!