Home News ನಗರಸಭೆ ಕಚೇರಿಯ ಮುಂದೆ ನೀರಿಗಾಗಿ ಹೋರಾಟ

ನಗರಸಭೆ ಕಚೇರಿಯ ಮುಂದೆ ನೀರಿಗಾಗಿ ಹೋರಾಟ

0

ನಗರದ ಏಳನೇ ವಾರ್ಡಿಗೆ ಸಮರ್ಪಕವಾಗಿ ನೀರು ಬಿಡುತ್ತಿಲ್ಲವೆಂದು ವಾರ್ಡಿನ ಮಹಿಳೆಯರು ಖಾಲಿ ಬಿಂದಿಗೆಗಳನ್ನಿಟ್ಟು ನಗರಸಭೆ ಕಚೇರಿಯ ಮುಂದೆ ಶುಕ್ರವಾರ ಪ್ರತಿಭಟಿಸಿದರು.
ವಾಟರ್ಮನ್ಗಳು ನೀರು ಬಿಡುವಲ್ಲಿ ತಾರತಮ್ಯ ಮಾಡುತ್ತಾರೆ. ಹಣವುಳ್ಳವರಿಗೆ ಮನೆಗಳಿಗೆ ಪೈಪ್ಲೈನ್ ಹಾಕಿಕೊಟ್ಟು, ಕೆಲವರ ರೇಷ್ಮೆ ಕಾರ್ಖಾನೆಗೆ ನೀರು ಬಿಡುತ್ತಾರೆ. ಬಡವರ ಮನೆಗಳ ಬಳಿ ನೀರು ಬಂದು ತಿಂಗಳುಗಳೇ ಆಗಿವೆ. ಕೇವಲ ಹಣಕ್ಕಾಗಿ ನೀರು ಅನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಮುಖ್ಯಾಧಿಕಾರಿಗೆ ನಗರಸಭೆ ಸದಸ್ಯರ ಮೂಲಕ ದೂರು ನೀಡಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳು ಸ್ಪಂದಿಸದ ಕಾರಣ ನಾವು ಖಾಲಿ ಬಿಂದಿಗೆಯೊಂದಿಗೆ ಬಂದು ಪ್ರತಿಭಟಿಸುತ್ತಿದ್ದೇವೆ ಎಂದು ಹೇಳಿದರು.
ನಮ್ಮ ವಾರ್ಡ್ನಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಚರಂಡಿಗಳು ತ್ಯಾಜ್ಯದಿಂದ ತುಂಬಿವೆ. ಖಾಯಿಲೆಗಳು ಹೆಚ್ಚುತ್ತಿವೆ. ಅಧಿಕಾರಿಗಳು ಕೇವಲ ಕಚೇರಿಗೆ ಸೀಮಿತರಾಗಿದ್ದಾರೆ ಎಂದು ದೂರಿದರು.
ಯರ್ರಮ್ಮ, ರಾಜಮ್ಮ, ವಾಣಿ, ನಾಗವೇಣಿ, ಅರುಣ, ವೆಂಕಟಮ್ಮ, ಅಪ್ಪು, ನಟರಾಜ್, ಮುನಿಕೃಷ್ಣ, ಮುನಿರಾಜು, ಆನಂದ್, ರಾಮಕೃಷ್ಣ, ಶಿವಪ್ಪ, ಮುನಿಯಪ್ಪ, ಕಲ್ಯಾಣ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!