ಗ್ರಾಮ ಜನತೆ ಭಯ ಭೀತಿ ಇಲ್ಲದೆ, ಮುಕ್ತವಾಗಿ ಜೀವಿಸುವಂತಹ ವಾತವರಣ ಮಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಯಿಂದ ಗ್ರಾಮ ಸಭೆಯನ್ನು ಏರ್ಪಡಿಸುವ ಉದ್ದೇಶವಾಗಿ ಸಭೆಯನ್ನು ಏರ್ಪಡಿಸುವ ಉದ್ದೇಶವಾಗಿದೆ ಎಂದು ಗ್ರಾಮಾಂತರ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾದ ಪ್ರದೀಪ್ ಪೂಜಾರಿ ತಿಳಿಸಿದರು.
ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿ ಏರ್ಪಡಿಸಿದ್ದ ದಸ್ತು ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮಗಳಲ್ಲಿ ನಡೆಯುವಂತಹ ಅಕ್ರಮ ಚಟುವಟಿಕೆಗಳು ಸಾರಾಯಿ ಮಾರಾಟ, ಜುಜಾಟಾ, ಮುಂತಾದ ಕಾನೂನು ಬಾಯಿರ ಚುಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಐದು ಗ್ರಾಮಗಳಿಂದ ಒಬ್ಬ ಪೊಲೀಸ್ ಪೇದೆಯನ್ನು ನೇಮಿಸಿದ್ದು, ಗ್ರಾಮದ ಸಾರ್ವಜನಿಕರ ಸಹಾಯ ಹಾಗೂ ಮೇಲ್ ಅಧಿಕಾರಿಗಳ ಮಾರ್ಗ ದರ್ಶನದಲ್ಲಿ ಗ್ರಾಮಗಳ ಕಾನೂನು ಬಾಯಿರ ಚಟುವಟಿಕೆಗಳಲ್ಲಿ ತೊಂಡಗುವುದನ್ನು ನಿಲ್ಲಿಸುವ ಉದ್ದೇಶದಿಂದ ಈ ಸಭೆ ನಡೆಸುವ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ನಾಗಮಂಗಲ ಗ್ರಾಮದಲ್ಲಿ ಹೆಚ್ಚು ಸಾರಾಯಿ ಮಾರಾಟವಿದ್ದು, ಯುವಕರು ಕುಡಿತಕ್ಕೆ ದಾಸರಾಗಿದ್ದು, ಮಹಿಳೆಯರು ಕೂಲಿ ಮಾಡಿ ತಂದ ಹಣವನ್ನು ಕುಡಿತಕ್ಕೆ ಉಪಯೋಗಿಸಿ ಮಹಿಳೆಯರು ಬಹಳ ಕಸ್ಟಪಡುವ ಸ್ಥಿತಿಯಲ್ಲಿ ಇದ್ದಾರೆ, ಆದ್ದರಿಂದ ಅಕ್ರಮ ಸಾರಾಯಿ ಮಾರಾಟವನ್ನು ನಿಲ್ಲಿಸಬೇಕೆಂದು ಗ್ರಾಮದ ಮಹಿಳೆಯರು ಸಭೆಯಲ್ಲಿ ಮನವಿ ಮಾಡಿದರು.
ಈ ಬಗ್ಗೆ ಕೂಡಲ್ಲೆ ಕ್ರಮ ಜರುಗಿಸುವುದಾಗಿ ಗ್ರಾಮಾಂತರ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾದ ಪ್ರದೀಪ ಪೂಜಾರಿ ತಿಳಿಸಿದರು.
ಈ ಸಂದರ್ಭದಲ್ಲಿ ಬೀಟ್ ಪೇದೆ ರಾಜಕುಮಾರ್, ನಾರಾಯಣಸ್ವಾಮಿ, ಶಿವಕುಮಾರ್, ವೆಂಕಟೇಶ್, ಶಿವರಾಜು, ಚಂದ್ರಶೇಖರ್, ಭಾರತಮ್ಮ, ವೆಂಕಟಲಕ್ಷಮ್ಮ, ಕನಕರತ್ನಮ್ಮ, ಮುನಿಯಮ್ಮ, ಲಕ್ಷ್ಮಿದೇವಮ್ಮ, ತಿಮ್ಮರಾಯಪ್ಪ, ಹಾಗೂ ಮುಂತಾದವರು ಹಾಜರಿದ್ದರು.