Home News ನೆಹರೂ ಕ್ರೀಡಾಂಗಣದಲ್ಲಿ ಉಚಿತ ಬೇಸಿಗೆ ಶಿಬಿರ: ಕ್ರೀಡಾಂಗಣಕ್ಕೆ ಬರುವ ವಾಯು ವಿಹಾರಿಗಳಿಂದಲೆ ಎಲ್ಲ ನೆರವು

ನೆಹರೂ ಕ್ರೀಡಾಂಗಣದಲ್ಲಿ ಉಚಿತ ಬೇಸಿಗೆ ಶಿಬಿರ: ಕ್ರೀಡಾಂಗಣಕ್ಕೆ ಬರುವ ವಾಯು ವಿಹಾರಿಗಳಿಂದಲೆ ಎಲ್ಲ ನೆರವು

0

ನಗರದ ನೆಹರೂ ಕ್ರೀಡಾಂಗಣದಲ್ಲಿ ಕಳೆದ ಕೆಲವು ದಿನಗಳಿಂದ ಬೇಸಿಗೆ ಶಿಬಿರ ನಡೆಯುತ್ತಿದೆ. ಶಿಬಿರದಲ್ಲಿ ಭಾಗವಹಿಸುತ್ತಿರುವ ಮಕ್ಕಳಿಗೆ ಕ್ರಿಡಾಂಗಣಕ್ಕೆ ಬರುವ ವಾಯು ವಿಹಾರಿಗಳೆ ದಿನವೂ ಪೌಷ್ಠಿಕ ಆಹಾರ, ತಿಂಡಿ, ತಿನಿಸು ವಿತರಿಸುತ್ತಾ ಶಿಬಿರದ ಖರ್ಚು ವೆಚ್ಚಗಳನ್ನು ಅವರೆ ಭರಿಸುತ್ತಿದ್ದಾರೆ.
ಬೇಸಿಗೆ ಕಾಲ ಬಂತೆಂದರೆ ಸಾಕು ಅಲ್ಲಲ್ಲಿ ಬೇಸಿಗೆ ಶಿಬಿರಗಳು ನಡೆಯುತ್ತವೆ. ಸರ್ಕಾರದ್ದೋ, ಸಂಘ ಸಂಸ್ಥೆಗಳ ಇಲ್ಲವೇ ದಾನಿಗಳ ಸಹಕಾರದಿಂದ ನಡೆಯುವ ಬೇಸಿಗೆ ಶಿಬಿರಗಳೂ ಉಂಟು, ಇಲ್ಲವೇ ಶುಲ್ಕ ವಸೂಲಿ ಮಾಡಿಕೊಂಡು ನಡೆಸುವ ಶಿಬಿರಗಳೂ ಉಂಟು. ಆದರೆ ನಗರದಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶಿಬಿರಕ್ಕೆ ಆ ಕ್ರೀಡಾಂಗಣಕ್ಕೆ ಬರುವ ವಾಯು ವಿಹಾರಿಗಳೆ ದಾನಿಗಳು. ಬೆಳಗಿನ ವೇಳೆ ವಾಯು ವಿಹಾರಕ್ಕೆ ಬರುವವರೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಬೇಸಿಗೆ ಶಿಬಿರವನ್ನು ಮುನ್ನೆಡೆಸುತ್ತಿದ್ದಾರೆ.
ರಾಷ್ಟ್ರೀಯ ವಾಲೀಬಾಲ್ ಕ್ರೀಡಾಪಟು ಮುನಿರಾಜು, ಕರಾಟೆ ಪಟು ಅರುಣ್ ಕುಮಾರ್, ಕ್ರೀಡಾ ಪ್ರೋತ್ಸಾಹಕರಾದ ಲಕ್ಷ್ಮೀಪತಿ, ರಾಜಶೇಖರ್ ಮೊದಲಾದವರು ತಾವೇ ಒಂದಷ್ಟು ಹಣ ಹಾಕಿಕೊಂಡು ಕಳೆದ ಮೂರು ವರ್ಷಗಳ ಹಿಂದೆ ಶಿಬಿರ ನಡೆಸಿದರು. ಇವರ ಆಸಕ್ತಿ ಕಂಡ ಆ ಕ್ರೀಡಾಂಗಣಕ್ಕೆ ಬರುವ ವಾಯು ವಿಹಾರಿಗಳೆ ಇದೀಗ ಶಿಬಿರಕ್ಕೆ ಬೇಕಾಗುವಂತ ಎಲ್ಲ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲು ಮುಂದಾಗಿದ್ದಾರೆ.
ಪ್ರತಿ ದಿನವೂ ಒಬ್ಬೊಬ್ಬರು ತಿಂಡಿ, ತಿನಿಸು, ಹಣ್ಣಿನ ಪಾನೀಯ ಮುಂತಾದ ಪೌಷ್ಠಿಕ ಆಹಾರ ಕೊಡುಗೆಯಾಗಿ ನೀಡುತ್ತಿದ್ಧಾರೆ. ಸಲಕರಣೆಗಳನ್ನು ಸಹ ಕೊಡುತ್ತಿದ್ದಾರೆ. ಜತೆಗೆ ಒಂದೊಂದು ದಿನ ಒಬ್ಬೊಬ್ಬರು ಬಂದು ಮಕ್ಕಳಿಗೆ ವಿಶೇಷ ಉಪನ್ಯಾಸ, ಸಲಹೆ ಸೂಚನೆಗಳನ್ನು ಕೊಟ್ಟು ಹೋಗುವ ಕೆಲಸ ಆಗುತ್ತಿದೆ.
ಕಳೆದ ಮೂರು ವರ್ಷಗಳ ಹಿಂದೆ ಈ ಶಿಬಿರದಲ್ಲಿ ಮೂವತ್ತು ಮಂದಿ ಇದ್ದು ಇದೀಗ ಆ ಸಂಖ್ಯೆ ೧೫೦ ದಾಟಿದೆ.
ಅಂತೂ ಹಣ ಕೊಟ್ಟು ಶಿಬಿರಕ್ಕೆ ಹೋಗದ ಎಷ್ಟೋ ಮಂದಿಗೆ ಈ ಶಿಬಿರ ಅನುಕೂಲ ಆಗಿದ್ದು ನಿತ್ಯವೂ ನೂರಾರು ಮಂದಿ ಚಿಣ್ಣರು ತಮಗೆ ಇಷ್ಟವಾದ ಕ್ರೀಡೆಯ ತರಬೇತಿ ಪಡೆದುಕೊಂಡು ಪೌಷ್ಠಿಕ ಆಹಾರವನ್ನು ತಿಂದು ಹೋಗುತ್ತಿದ್ದಾರೆ.

error: Content is protected !!