Home News ಪತೀಕ್ಷಾರ್ಥಿ ಕೃಷಿ ಅಧಿಕಾರಿಗಳಿಂದ ಸಮಗ್ರ ಕೃಷಿ ಪದ್ಧತಿಯ ವೀಕ್ಷಣೆ

ಪತೀಕ್ಷಾರ್ಥಿ ಕೃಷಿ ಅಧಿಕಾರಿಗಳಿಂದ ಸಮಗ್ರ ಕೃಷಿ ಪದ್ಧತಿಯ ವೀಕ್ಷಣೆ

0

ಜಿಲ್ಲೆಯಾದ್ಯಂತ ನೂತನವಾಗಿ ಕೃಷಿ ಇಲಾಖೆಗೆ ನೇಮಕಗೊಂಡಿರುವ ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಹಾಗೂ ಸಹಾಯಕ ಕೃಷಿ ಅಧಿಕಾರಿಗಳು ಸಾಮಾನ್ಯ ಬುನಾದಿ ತರಬೇತಿಯಡಿ ತಾಲ್ಲೂಕಿನ ಹಿತ್ತಲಹಳ್ಳಿಯ ಪ್ರಗತಿಪರ ರೈತ ಎಚ್.ಜಿ.ಗೋಪಾಲಗೌಡ ಅವರ ತೋಟಕ್ಕೆ ಶನಿವಾರ ಭೇಟಿ ನೀಡಿದ್ದರು.
ಜಂಟಿ ಕೃಷಿ ನಿರ್ದೇಶಕರ ಸೂಚನೆಯ ಮೇರೆಗೆ ರೇಷ್ಮೆ ಇಲಾಖೆಯ ಸಹಯೋಗದಲ್ಲಿ ಕ್ಷೇತ್ರ ಭೇಟಿಗಾಗಿ ಆಗಮಿಸಿದ್ದ ಸುಮಾರು ೧೪ ಮಂದಿ ನೂತನ ಅಧಿಕಾರಿಗಳು ಪ್ರಗತಿಪರ ರೈತ ಗೋಪಾಲಗೌಡರೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.
ಸಮಗ್ರ ಕೃಷಿ ಪದ್ಧತಿ, ಕೃಷಿ ಹೊಂಡದಿಂದ ನೀರಿನ ಸದ್ಬಳಕೆ, ರೇಷ್ಮೆಯಲ್ಲಿ ಹಸಿರು ಎಲೆ ಗೊಬ್ಬರವಾಗಿ ಪರಿವರ್ತಿಸಲು ಸೆಣಬು ಹುರಳಿ ಬೆಳೆದಿರುವುದು, ಕುರಿ, ಹಸು ಸಾಕಣೆ, ರೇಷ್ಮೆ ಕೃಷಿ ಹಾಗೂ ಜಮೀನಿನ ಸುತ್ತಲೂ ಸಿಲ್ವರ್ ಮರ, ೨೪ ಅಡಿಗೊಂದರಂತೆ ಮಾವು, ಆರು ಅಡಿ ಅಂತರದಲ್ಲಿ ಹಿಪ್ಪುನೇರಳೆ, ಅದರ ನಡುವೆ ತರಕಾರಿ ಬೆಳೆಗಳು, ಕೃಷಿ ಹೊಂಡ, ಅದರ ಸುತ್ತಲೂ ಮಾವು, ಗೋಡಂಬಿ, ನಿಂಬೆ, ಹಲಸು, ಪಪ್ಪಾಯ, ಬಾಳೆ, ನೆಲ್ಲಿ, ಸೀಬೆ, ಸಪೋಟ, ದಾಳಿಂಬೆ, ಕಿತ್ತಳೆ, ಚಕ್ಕೆ ಗಿಡ, ಗೆಣಸು ಮುಂತಾದವುಗಳನ್ನು ಬೆಳೆದಿದ್ದು ಎಲ್ಲರೂ ಸಮಗ್ರ ಬೇಸಾಯ ಪದ್ದತಿ ಅಳವಡಿಸಿಕೊಂಡಿದ್ದೇ ಆದಲ್ಲಿ ಈ ಭಾಗದ ರೈತನಿಗೆ ಲಾಭದಾಯಕವಾಗಲಿದೆ ಎಂಬುದನ್ನು ರೈತ ಹೆಚ್.ಜಿ.ಗೋಪಾಲಗೌಡ ನೂತನ ಅಧಿಕಾರಿಗಳಿಗೆ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ರಾಮಕೃಷ್ಣ, ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ್ ಹಾಜರಿದ್ದರು.

error: Content is protected !!