Home News ಪತ್ರಕರ್ತರ ಭವನದ ಮುಂದೆ ಸ್ವಾತಂತ್ರ್ಯ ದಿನಾಚರಣೆ

ಪತ್ರಕರ್ತರ ಭವನದ ಮುಂದೆ ಸ್ವಾತಂತ್ರ್ಯ ದಿನಾಚರಣೆ

0

ನಗರದಲ್ಲಿ ಮಂಗಳವಾರ ತಾಲ್ಲೂಕು ಕಾರ್ಯನಿರತ ಪರ್ತಕರ್ತರ ಸಂಘದ ವತಿಯಿಂದ ಟಿ.ಬಿ.ರಸ್ತೆಯ ಪತ್ರಕರ್ತರ ಭವನದ ಮುಂದೆ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ಮತ್ತು ಪತ್ರಿಕಾ ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಡಿ.ವಿ.ಜಿ ಮತ್ತು ಭಾರತಮಾತೆಯ ಚಿತ್ರಪಟಕ್ಕೆ ಪೂಜೆಯನ್ನು ಸಲ್ಲಿಸಿ, ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಪಿ.ಈ.ಕರಗಪ್ಪ, ‘ಸ್ವಾತಂತ್ರ್ಯ ಸಂಭ್ರಮವು ನಮಗೆ ಸಂತಸದೊಂದಿಗೆ ಜವಾಬ್ದಾರಿಯನ್ನೂ ಹೊತ್ತು ತರುತ್ತದೆ. ಪತ್ರಕರ್ತರ ನಿಸ್ವಾರ್ಥ ಸೇವೆಗೆ ಸಮಾಜದಲ್ಲಿ ಬೆಲೆಯಿರುತ್ತದೆ. ಡಿವಿಜಿ ಅವರ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡು ಪತ್ರಿಕೆ ಮತ್ತು ಮಾಧ್ಯಮದ ಘನತೆಯನ್ನು ಹೆಚ್ಚಿಸುವ ಕೆಲಸವನ್ನು ಮಾಡಬೇಕು’ ಎಂದು ಹೇಳಿದರು.

ಪತ್ರಕರ್ತರ ಭವನದ ಮುಂದೆ ಸ್ವಾತಂತ್ರ್ಯ ದಿನಾಚರಣೆ

ಆಶಾಕಿರಣ ಅಂಧ ಮಕ್ಕಳ ಶಾಲೆಯ ಮಕ್ಕಳು ಬ್ಯಾಂಡ್ ಸೆಟ್ ನುಡಿಸಿ, ವಂದೇ ಮಾತರಂ ಗೀತೆಯನ್ನು ಹಾಡಿದರು.
ಪತ್ರಕರ್ತರಾದ ಶಶಿಕುಮಾರ್, ಡಿ.ಜಿ.ಮಲ್ಲಿಕಾರ್ಜುನ, ಜಗದೀಶ್ ಬಾಬು, ಮುನಿನಾರಾಯಣ, ನಾಗರಾಜ್, ವಿಸ್ಡಂ ನಾಗರಾಜ್, ರಮೇಶ್, ರಾಜೇಶ್, ಲೋಕೇಶ್, ನರಸಿಂಹಗೌಡ, ಮುನೀಂದ್ರ, ಪ್ರಕಾಶ್, ನಾರಾಯಣಸ್ವಾಮಿ, ಮಹೇಶ್, ನಾಗಭೂಷಣ್, ವೆಂಕಟೇಶ್ ಹಾಜರಿದ್ದರು.
 

error: Content is protected !!