ಪರಿಸರ ದಿನಾಚರಣೆಯ ಪ್ರಯುಕ್ತ ತಾಲ್ಲೂಕಿನ ಇಪ್ಪತ್ತು ಸರ್ಕಾರಿ ಶಾಲೆಗಳ ಆವರಣದಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಮಕ್ಕಳೇ ನೀರೆರೆದು ಪೋಷಿಸುವಂತೆ ಅರಿವು ಮೂಡಿಸಿದೆವು ಎಂದು ಹಸಿರಿಗಾಗಿ ಉಸಿರು ಸಂಸ್ಥೆಯ ನಿರ್ದೇಶಕ ಗಂಗಾಧರ್ ತಿಳಿಸಿದರು.
ತಾಲ್ಲೂಕಿನ ಗುಡಿಹಳ್ಳಿಯ ಸರ್ಕಾರಿ ಶಾಲೆಯ ಆವರಣದಲ್ಲಿ ಆರ್.ಟಿ.ಇ ಕಾರ್ಯಪಡೆ ಮತ್ತು ಹಸಿರಿಗಾಗಿ ಉಸಿರು ಸಂಸ್ಥೆ ವತಿಯಿಂದ ಗಿಡಗಳನ್ನು ನೆಟ್ಟು ಅವರು ಮಾತನಾಡಿದರು.
ಈ ದಿನ ಒಟ್ಟು 778 ಗಿಡಗಳನ್ನು ನೆಟ್ಟೆವು. ಮಕ್ಕಳಲ್ಲಿ ಗಿಡಮರಗಳ ಅಗತ್ಯವನ್ನು ವಿವರಿಸಿದೆವು. ಪ್ರತಿಯೊಬ್ಬರೂ ಗಿಡಗಳ ಆರೈಕೆ ಮಾಡುವಂತೆ ವಿನಂತಿಸಿದೆವು ಎಂದು ಹೇಳಿದರು.
ಆರ್.ಟಿ.ಇ ಕಾರ್ಯಪಡೆ ಜಿಲ್ಲಾ ಸಂಚಾಲಕ ಜೆ.ಸತೀಶ್, ಕಾಂತರಾಜು, ಎಂ.ಎಸ್.ಡಬ್ಲೂ ವಿದ್ಯಾರ್ಥಿಗಳು, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.