ರಂಜಾನ್ ಮಾಸ ಪ್ರಾರಂಭವಾಗುವುದರಿಂದ ಪೊಲೀಸರು ಮುಸ್ಲಿಂ ಬಾಂಧವರಿಗೆ ಕೊರೊನಾ ಹಿನ್ನೆಲೆಯಲ್ಲಿ ಕೆಲವೊಂದು ಸೂಚನೆಗಳಿರುವ ಕರಪತ್ರವನ್ನು ನಗರದಲ್ಲಿ ಹಂಚುತ್ತಿದ್ದಾರೆ.
ರಂಜಾನ್ ತಿಂಗಳಲ್ಲಿ ಮೊಹಲ್ಲಾ, ಮಸೀಸಿ, ಮದರಸಾ ಅಥವಾ ದರ್ಗಾಗಳಲ್ಲಿ ಯಾವುದೇ ರೀತಿಯ ಗಂಜಿ, ಜ್ಯೂಸ್, ತಿಂಡಿ ತಯಾರಿಸಿ ವಿತರಿಸುವಂತಿಲ್ಲ. ತಿಂಡಿಗಳ ಅಂಗಡಿಗಳನ್ನು ತೆರೆಯುವಂತಿಲ್ಲ. ಝಕಾತ್ ಸಂಬಂಧ ಮಾಡುತ್ತಿದ್ದ ದಾನಗಳನ್ನು ಜಿಲ್ಲಾಡಳಿತದ ಅನುಮತಿಯಿಲ್ಲದೆ ಮಾಡುವಂತಿಲ್ಲ. ದಾವತ್ ಅಥವಾ ಇಫ್ತಾರ್ ಕೂಟಗಳನ್ನು ಆಯೋಜಿಸುವಂತಿಲ್ಲ ಎಂದು ಕರಪತ್ರದಲ್ಲಿ ಮುದ್ರಿಸಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಕೋರುತ್ತಿದ್ದಾರೆ.