Home News ಪ್ರಗತಿಪರ ರೈತ ಆನೂರು ಜಿ.ಬಚ್ಚಪ್ಪ ನಿಧನ

ಪ್ರಗತಿಪರ ರೈತ ಆನೂರು ಜಿ.ಬಚ್ಚಪ್ಪ ನಿಧನ

0

ಪ್ರಗತಿಪರ ರೈತ, ಸರ್‌.ಎಂ.ವಿಶ್ವೇಶ್ವರಯ್ಯ ರೈತಕೂಟದ ಅಧ್ಯಕ್ಷ ಆನೂರು ಜಿ.ಬಚ್ಚಪ್ಪ(74) ಬುಧವಾರ ರಾತ್ರಿ ನಿಧನರಾಗಿದ್ದಾರೆ. ಈಚೆಗೆ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಪತ್ನಿ, ಒಬ್ಬ ಮಗ ನಾಲ್ವರು ಹೆಣ್ಣುಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅವರು ಅಗಲಿದ್ದಾರೆ.
ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಅವರು, ಹನಿನೀರಾವರಿ ಮತ್ತು ಸಾವಯವ ಪದ್ಧತಿಯಲ್ಲಿ ಅತಿ ಹೆಚ್ಚು ರಾಗಿ ಬೆಳೆದು ಹಾಗೂ ಸಮಗ್ರ ಕೃಷಿ ಅಳವಡಿಸಿಕೊಂಡಿರುವುದಕ್ಕೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರು.
ಮೃತರ ಅಂತ್ಯಕ್ರಿಯೆಯನ್ನು ಆನೂರು ಗ್ರಾಮದಲ್ಲಿ ಗುರುವಾರ ನಡೆಸಲಾಯಿತು. ರಾಜಕೀಯ ಮುಖಂಡರು, ರೈತ ಸಂಘದ ಸದಸ್ಯರು, ರೈತಕೂಟಗಳ ಸದಸ್ಯರು, ಸಾವಯವ ಕೃಷಿಕರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.