ಪ್ರಧಾನಿ ಮೋದಿಯವರನ್ನು ಬೆಂಬಲಿಸಲು ಕೋರಿ "ಟೀಂ ಮೋದಿ” – ಬೃಹತ್ ಬೈಕ್ ರ‍್ಯಾಲಿ

0
456

ನಗರದ ಮಯೂರ ವೃತ್ತದಲ್ಲಿ ಭಾನುವಾರ ಸಂಜೆ “ಟೀಂ ಮೋದಿ” ಎಂಬ ಬೃಹತ್ ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡು ಯುವಾ ಬ್ರಿಗೇಡ್ ಜಿಲ್ಲಾ ಸಂಚಾಲಕ ಅಭಿಲಾಷ್ ಸೋಮೇನಹಳ್ಳಿ ಮಾತನಾಡಿದರು.
ದೇಶ ಅಭಿವೃದ್ಧಿ ಪಥದಲ್ಲಿ ಸಾಗಬೇಕು. ಹಾಗಾಗಿ ನಮ್ಮ ರಾಷ್ಟ್ರದ ಹಿತದೃಷ್ಟಿಯಿಂದ ಪ್ರಧಾನಿ ಮೋದಿಯವರನ್ನು ಬೆಂಬಲಿಸಲು ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ದೇಶಕ್ಕಾಗಿ ಇಡೀ ಜೀವಮಾನವನ್ನೇ ಮುಡುಪಾಗಿಟ್ಟಿರುವ ನಿಸ್ವಾರ್ಥ ನಾಯಕ ನಮ್ಮ ಪ್ರಧಾನಿ ನರೇಂದ್ರ ಮೋದಿ. ಇಡೀ ವಿಶ್ವದ ಜನ ಇಂದು ಭಾರತವನ್ನು ಅಭಿಮಾನದಿಂದ ಹುಬ್ಬೇರಿಸಿ ನೋಡುವಂತಾಗಿದೆ. ನಮ್ಮ ದೇಶದ ಅಬಿವೃದ್ಧಿಯನ್ನು ವಿದೇಶದ ಜನರು ಕೊಂಡಾಡುತ್ತಿದ್ದಾರೆ. ಆದರೆ ಭಾರತೀಯರಾದ ನಾವು ಈ ಬಗ್ಗೆ ಹೆಮ್ಮೆ ಪಡದೆ ಕೇವಲ ಟೀಕೆ ಟಿಪ್ಪಣಿಗಳಲ್ಲೇ ಕಾಲ ಕಳೆಯುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ನಗರದ ಹಲವಾರು ಯುವಕರು ಸ್ವಯಂಪ್ರೇರಿತರಾಗಿ “ಟೀಂ ಮೋದಿ”ಯನ್ನು ಬೆಂಬಲಿಸಿ ಮುಂಬರುವ ಚುನಾವಣೆಗಳಲ್ಲಿ ದೇಶದ ಹಿತದೃಷ್ಟಿಯಿಂದ ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಕೈಗೊಳ್ಳಬೇಕು. ವಾಸ್ತವತೆಯನ್ನು ಜನರಿಗೆ ತಿಳಿಸಬೇಕು. ಮುಂದಿನ ಲೋಕಸಭಾ ಚುನಾವಣೆಯಲ್ಲಿ 300 ಕ್ಕು ಹೆಚ್ಚು ಬಿಜೆಪಿ ಲೋಕಸಭಾ ಸದಸ್ಯರನ್ನು ಗೆಲ್ಲಿಸಬೇಕಿದೆ. ಆಗ ಮಾತ್ರ ಪ್ರಧಾನಿ ಕೈಗೊಂಡಿರುವ ರಾಷ್ಟ್ರ ಕೈಂಕರ್ಯಕ್ಕೆ ಸಹಕಾರಿಯಾಗಲಿದೆ. ವಿಶ್ವಗುರು ಸ್ಥಾನವನ್ನು ಕಲ್ಪಿಸಿಕೊಡಲು ಹಾಗೂ ಜಗತ್ತಿನಲ್ಲಿ ಭಾರತಕ್ಕೆ ಮತ್ತು ಭಾರತೀಯರಿಗೆ ಈಗಾಗಲೇ ಮೋದಿಯವರು ತಂದು ಕೊಟ್ಟಿರುವ ಗೌರವ ಹೀಗೇ ಮುಂದುವರಿಯಬೇಕಾದರೆ, ಭಾರತ ಎಲ್ಲಾ ಕ್ಷೇತ್ರಗಳಲ್ಲಿಯೂ ಅತ್ಯುನ್ನತ ಸಾಧನೆ ಮಾಡಲು ಮೋದಿಯವರೆ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಹೇಳಿದರು.
ಬೈಕ್ ರ‍್ಯಾಲಿಯನ್ನು ಉದ್ಘಾಟಿಸಿದ ನಿವೃತ್ತ ಯೋಧ ಹಾಗೂ ಹಿರಿಯ ಪತ್ರಕರ್ತ ಎಸ್.ವಿ.ಐಯ್ಯರ್ ಮಾತನಾಡಿ, ನಮ್ಮ ದೇಶವು ವಿಶ್ವ ನಾಯಕತ್ವವನ್ನು ಹೊಂದಲು ಮತ್ತೊಮ್ಮೆ ಮೋದಿಯವರನ್ನು ಪ್ರದಾನಿಯನ್ನಾಗಿ ಮಾಡುವ ಶಪಥವನ್ನು ಕೈಗೊಳ್ಳಬೇಕೆಂದರು.
ನೂರಕ್ಕೂ ಅಧಿಕ ಮಂದಿ ಬೈಕ್ ರ‍್ಯಾಲಿಯಲ್ಲಿ ಪಾಲ್ಗೂಂಡಿದ್ದ ಯುವಕರು ರಾಷ್ಟ್ರಧ್ವಜವನ್ನು ಹಿಡಿದು ಭಾರತ ಮಾತೆಯ ಜಯಘೋಷದೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು.
ಈ ಸಂದರ್ಭದಲ್ಲಿ ಟೀಂ ಮೋದಿ ಶಿಡ್ಲಘಟ್ಟ ಸಂಚಾಲಕ ಶ್ರೀನಿವಾಸ್ ಪ್ರಸಾದ್, ಪುರುಷೋತ್ತಮ್, ನಾಗೇಶ್, ಶಶಿಕಾಂತ್, ನರೇಶ್, ಕೇಶವ, ಮಂಜುನಾಥ್, ನಾಗೇಂದ್ರ, ಯತೀಶ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!