Home News ಬಾಬು ಜಗಜೀವನ್ ರಾಮ್ ಸಮುದಾಯ ಭವನಕ್ಕೆ ಭೂಮಿ ಪೂಜೆ

ಬಾಬು ಜಗಜೀವನ್ ರಾಮ್ ಸಮುದಾಯ ಭವನಕ್ಕೆ ಭೂಮಿ ಪೂಜೆ

0

ಭಕ್ತರಹಳ್ಳಿ ಗ್ರಾಮದಲ್ಲಿ ಒಂದು ವರ್ಷದ ಅವಧಿಯಲ್ಲಿ ಮೂರು ಕೊಳವೆ ಬಾವಿಗಳನ್ನು ಕೊರೆಸಿದ್ದರೂ ನೀರು ಸಿಗದಂತಾಗಿದೆ. ಇದೀಗ ಮತ್ತೊಂದು ಕೊಳವೆ ಬಾವಿಯನ್ನು ಶೀಘ್ರವಾಗಿ ಕೊರೆಸಲಾಗುವುದು. ಅಂತರ್ಜಲ ವೃದ್ಧಿಯಾಗಲಿ ಎಂದು ಎಚ್.ಎನ್.ವ್ಯಾಲಿ ನೀರಿಗೆ ಎದುರುನೋಡುತ್ತಿದ್ದೇವೆ ಎಂದು ಶಾಸಕ ವಿ.ಮುನಿಯಪ್ಪ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ ಶುಕ್ರವಾರ ಹತ್ತು ಲಕ್ಷ ರೂಗಳ ವೆಚ್ಚದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಿರ್ಮಿಸುತ್ತಿರುವ ಬಾಬು ಜಗಜೀವನ್ ರಾಮ್ ಸಮುದಾಯ ಭವನಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಹಲವು ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕದ ದುರಸ್ಥಿ ಕಾರ್ಯ ನಡೆದಿಲ್ಲವೆಂದು ದೂರು ಬಂದಿದೆ. ಆಯಾ ಗ್ರಾಮ ಪಂಚಾಯಿತಿಯವರು ಜವಾಬ್ದಾರಿ ತೆಗೆದುಕೊಂಡು ದುರಸ್ಥಿ ಮಾಡಿಸಿ, ಕುಡಿಯುವ ನೀರಿಗೆ ಆದ್ಯತೆ ಕೊಡಿ ಎಂದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಚಿದಾನಂದಗೌಡ, ಮುನಿಕೃಷ್ಣಪ್ಪ, ಮುಖಂಡರಾದ ಬಿ.ವಿ.ಮುನೇಗೌಡ, ಸುಬ್ರಮಣಿ, ಎಂ.ವೆಂಕಟಮೂರ್ತಿ, ಬಿ.ವಿ.ಕೃಷ್ಣಪ್ಪ, ನಂಜುಂಡಾರಾಧ್ಯ, ಬಿ.ಕೆ.ರಾಮಚಂದ್ರಪ್ಪ, ದೇವರಾಜ್, ಲಕ್ಷ್ಮೀನಾರಾಯಣ, ಹೇಮಂತ್ ಕುಮಾರ್, ಪ್ರತೀಶ್, ಮಧು, ಓಬಳಪ್ಪ, ಚನ್ನಕೃಷ್ಣ, ಪಿ.ಡಿ.ಒ ಜಮುನಾ ಹಾಜರಿದ್ದರು.

error: Content is protected !!