Home News ಬಿಜೆಪಿ ಏಕ ನಾಯಕತ್ವದ ಪಕ್ಷವಲ್ಲ. ಸಾಮೂಹಿಕ ನಾಯಕತ್ವದ ಪಕ್ಷ

ಬಿಜೆಪಿ ಏಕ ನಾಯಕತ್ವದ ಪಕ್ಷವಲ್ಲ. ಸಾಮೂಹಿಕ ನಾಯಕತ್ವದ ಪಕ್ಷ

0

ಬಿಜೆಪಿ ಏಕ ನಾಯಕತ್ವದ ಪಕ್ಷವಲ್ಲ. ಸಾಮೂಹಿಕ ನಾಯಕತ್ವದ ಪಕ್ಷ. ಪ್ರತಿಯೊಬ್ಬ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ತಾವೇ ಪಕ್ಷದ ಅಭ್ಯರ್ಥಿಯೆಂಬಂತೆ ತಮ್ಮ ತಮ್ಮ ಬೂತ್ಗಳನ್ನು ಸದೃಢಗೊಳಿಸಬೇಕೆಂದು ಬಿಜೆಪಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ.ನಂದೀಶ್ ತಿಳಿಸಿದರು.
ತಾಲ್ಲೂಕಿನ ಗಂಜಿಗುಂಟೆ ಪಂಚಾಯಿತಿಯ ಯರ್ರಬಚ್ಚಹಳ್ಳಿಯಲ್ಲಿ ಬೂತ್ ಸಶಕ್ತಿಕರಣ ಮತ್ತು ಪರಿವರ್ತನಾ ಯಾತ್ರೆ ಪ್ರಚಾರ ನಡೆಸಿ ಅವರು ಮಾತನಾಡಿದರು.
ಜನವರಿ 12 ರಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ನಗರಕ್ಕೆ ಆಗಮಿಸಲಿದ್ದು ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಚುನಾವಣೆಗೆ ಕೆಲವೇ ತಿಂಗಳಿದ್ದು ಕಾರ್ಯಕರ್ತರು ಮಂಡಲದ ಪ್ರತಿಯೊಂದು ಬೂತ್ಗಳಿಗೆ ತೆರಳಿ ಕೇಂದ್ರ ಸರ್ಕಾರ ತಂದಿರುವ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಬೇಕಿದೆ. ಇದರೊಂದಿಗೆ ಸಶಕ್ತ ಮತಗಟ್ಟೆ ತಂಡಗಳನ್ನು ರಚಿಸುವ ಕೆಲಸವೂ ನಡೆದಿದೆ. ಪ್ರತಿ ಬೂತ್ ಉಸ್ತುವಾರಿಗಳು ನಿತ್ಯ 2 ಗಂಟೆ ಸಮಯನೀಡಿ ಸಂಘಟನೆಗೆ ಒತ್ತು ನೀಡಿ, ನಿಮ್ಮ ಬೂತ್ಗಳಲ್ಲಿ ಬಿಜೆಪಿ ಅಭ್ಯರ್ಥಿಯತ್ತ ಹೆಚ್ಚು ಮತಗಳನ್ನು ಸೆಳೆಯಬೇಕೆಂದು ಹೇಳಿದರು.
ಬಿಜೆಪಿ ಮುಖಂಡ ಶಿವಕುಮಾರಗೌಡ ಮಾತನಾಡಿ, ಈಗಾಗಲೇ ತುಮ್ಮನಹಳ್ಳಿ ಮತ್ತು ಚೀಮಂಗಲ ಪಂಚಾಯಿತಿಗಳ ಗ್ರಾಮಗಳಲ್ಲಿ ಬೂತ್ ಸಶಕ್ತಿಕರಣ ಮತ್ತು ಪರಿವರ್ತನಾ ಯಾತ್ರೆ ಪ್ರಚಾರ ಕೈಗೊಂಡಿದ್ದೇವೆ. ಹೊಸಮತದಾರರು, ಯುವ ಜನತೆ ಬಿಜೆಪಿ ಪರ ಒಲವಿದ್ದು ತಾಲ್ಲೂಕಿನ ಜನತೆ ಬದಲಾವಣೆ ಬಯಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಜನಬೆಂಬಲ ಗಳಿಸಲಿದೆ ಎಂದು ತಿಳಿಸಿದರು.
ಬಿಜೆಪಿ ಮುಖಂಡರಾದ ಸುರೇಂದ್ರಗೌಡ, ಶ್ರೀರಾಮರೆಡ್ಡಿ, ಗಂಜಿಗುಂಟೆ ಶಕ್ತಿ ಕೇಂದ್ರದ ಅಧ್ಯಕ್ಷ ವೈ.ಎಂ.ವೆಂಕಟೇಶ್, ಮಂಜುಳಮ್ಮ, ಸುಜಾತಮ್ಮ, ದಾಮೋದರ್ ಹಾಜರಿದ್ದರು.