Home News ಬಿ.ಎಂ.ವಿ ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ನ ಪಧಾಧಿಕಾರಿಗಳ ಪದಗ್ರಹಣ

ಬಿ.ಎಂ.ವಿ ಶಾಲೆಯಲ್ಲಿ ಇಂಟರಾಕ್ಟ್ ಕ್ಲಬ್ ನ ಪಧಾಧಿಕಾರಿಗಳ ಪದಗ್ರಹಣ

0

ತಾಲ್ಲೂಕಿನ ಭಕ್ತರಹಳ್ಳಿಯ ಬಿ.ಎಂ.ವಿ ಪ್ರೌಢಶಾಲೆಯ ಶ್ರೀ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಶನಿವಾರ ನಡೆದ ಇಂಟರಾಕ್ಟ್ ಕ್ಲಬ್ ನ ಪಧಾಧಿಕಾರಿಗಳು ಹಾಗೂ ಕಾರ್ಯಕಾರಿ ಮಂಡಲಿ ಸದಸ್ಯರ “ಪದಗ್ರಹಣ” ಕಾರ್ಯಕ್ರಮದಲ್ಲಿ ರೋಟರಿ ಬೆಂಗಳೂರು ಸೆಂಟಿನಿಯಲ್ ಅಧ್ಯಕ್ಷ ವಿವೇಕಾನಂದ ನಾಯಕ್ ಮಾತನಾಡಿದರು.
ಎಲ್ಲರೂ ಸೇವಾಮನೋಭಾವ ಬೆಳೆಸಿಕೊಂಡು ತಮ್ಮ ಕೈಲಾದಷ್ಟು ಸಮಾಜ ಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಅವರು ತಿಳಿಸಿದರು.
೨೦೧೯-೨೦ನೇ ಸಾಲಿಗೆ ಬಿ.ಎಂ.ವಿ ಇಂಟರಾಕ್ಟ್ ಕ್ಲಬ್ ನ ಅಧ್ಯಕ್ಷೆಯಾಗಿ ಬಿ.ಎಸ್.ತೇಜಸ್ವಿನಿ, ಕಾರ್ಯದರ್ಶಿಯಾಗಿ ಬಿ.ಸಿರೀಶ, ಉಪಾಧ್ಯಕ್ಷ ಬಿ.ಎನ್.ಮನೋಹರ್, ಖಜಾಂಚಿ ಜಿ.ಲೇಖನ, ಸದಸ್ಯರಾಗಿ ಬಿ.ಎಂ.ಸೋನು, ಜಿ.ಭಾನುಶ್ರೀ, ಮತ್ತು ಬಿ.ಎನ್.ಪ್ರಜ್ವಲ್ ಆಯ್ಕೆಯಾದರು. ಆಯ್ಕೆಯಾದವರಿಗೆ ಹಿಂದಿನ ಅಧ್ಯಕ್ಷ ಪೂರ್ಣೇಶ್ ಮತ್ತು ಕಾರ್ಯದರ್ಶಿ ಮನುಶ್ರೀ ಅಧಿಕಾರ ಹಸ್ತಾಂತರಿಸಿದರು. ರೋಟರಿ ಬೆಂಗಳೂರು ಸೆಂಟಿನಿಯಲ್ ಅಧ್ಯಕ್ಷ ವಿವೇಕಾನಂದ ನಾಯಕ್ ಪ್ರತಿಜ್ಞಾವಿಧಿಯನ್ನು ಬೋದಿಸಿದರು.
ರೋಟರಿ ಸಂಸ್ಥೆ ಇಡೀ ಪ್ರಪಂಚದಲ್ಲೇ ಖ್ಯಾತಿ ಪಡೆದ ಸೇವಾ ಸಂಸ್ಥೆಯಾಗಿದೆ. ಭಕ್ತರಹಳ್ಳಿಯ ಬಿ.ಎಂ.ವಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಳೆದ ಮೂರು ವರ್ಷಗಳಿಂದ “ಇಂಟರಾಕ್ಟ್ ಕ್ಲಬ್” ನ ಅಡಿಯಲ್ಲಿ ಮುಷ್ಠಿ ತುಂಬಾ ರಾಗಿ, ಮುಷ್ಠಿ ತುಂಬಾ ಅಕ್ಕಿ ಕಾರ್ಯಕ್ರಮದ ಜೊತೆಗೆ, ಪಲ್ಸ್ ಪೋಲಿಯೋ, ಪರಿಸರ ಸಂರಕ್ಷಣೆ, ಸ್ವಚ್ಚ ಗ್ರಾಮ, ಸ್ವಚ್ಚ ಶಾಲೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ಬಿ.ಎಂ.ವಿ ಸಂಸ್ಥೆಯ ಕಾರ್ಯದರ್ಶಿ ಎಲ್.ಕಾಳಪ್ಪ ಮಾತನಾಡಿ, ಬಿ.ಎಂ.ವಿ ಪ್ರೌಢಶಾಲೆಯ ಮಕ್ಕಳಲ್ಲಿ ಸೇವಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಮೂರು ವರ್ಷಗಳ ಹಿಂದೆ ರೋಟರಿ ಇಂಟರಾಕ್ಟ್ ಕ್ಲಬ್ಬನ್ನು ಸ್ಥಾಪಿಸಿದ್ದು, ಅವರಲ್ಲಿ ತಮ್ಮಲ್ಲಿರುವುದು ಇಲ್ಲದವರಿಗೆ ನೀಡುವ ಭಾವ ಬೆಳೆಸಲು ಸಫಲರಾಗಿದ್ದೇವೆ. ಈ ಕಾರ್ಯಕ್ರಮ ಸಾರ್ಥಕ ರೂಪ ಪಡೆದುಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಬಿ.ಎಂ.ವಿ ಶಾಲೆಯ ೨೦೧೮ – ೧೯ ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ಬಿ.ಆರ್.ಮಾಯ ಮತ್ತು ಚೇತನ್ ಕುಮಾರ್ ಅವರಿಗೆ ರೋಟರಿ ಸಂಸ್ಥೆಯ ಎಂ.ಎಸ್.ಮಂಜುನಾಥ್ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ರೋಟರಿ ಬೆಂಗಳೂರು ಸೆಂಟಿನಿಯಲ್ ಪದಾಧಿಕಾರಿಗಳಾದ ನಂದಿನಿ ಜಗನ್ನಾಥ್, ಎನ್.ಟಿ.ಸಾಗರ್, ರಾಮಪ್ರಿಯ, ಪದ್ಮಿನಿ ರಾಮ್, ಎಂ.ಎಸ್.ಮಂಜುನಾಥ್, ರೇಖಾ ನಾಯಕ್, ರಾಜೇಂದ್ರ, ಬಿ.ಎಂ.ವಿ.ಸಂಥೆಯ ಅಧ್ಯಕ್ಷ ಬಿ.ವಿ.ಮುನೇಗೌಡ, ಟ್ರಸ್ಟಿಗಳಾದ ಸಂತೆ ನಾರಾಯಣಸ್ವಾಮಿ, ವೆಂಕಟಮೂರ್ತಿ, ಎ.ಎನ್.ದೇವರಾಜ್, ಮುನಿರಾಜ್, ಗ್ರಾಮ ಪಂಚಾಯಿತಿ ಸದಸ್ಯ ಆನಂದ್, ರೋಟರಿ ಇಂಟರಾಕ್ಟ್ ಕ್ಲಬ್ ಶಿಕ್ಷಕಿ ಉಷಾರಾಣಿ ಹಾಜರಿದ್ದರು.

error: Content is protected !!