Home News ಬೆಂಕಿಗೆ ಆಹುತಿಯಾದ ಅರಣ್ಯ

ಬೆಂಕಿಗೆ ಆಹುತಿಯಾದ ಅರಣ್ಯ

0

ವೃಕ್ಷ ಬೆಳೆಗಾರರ ಸಂಘದ ವತಿಯಿಂದ ಸಂರಕ್ಷಿಸಲಾಗಿದ್ದ ಸುಮಾರು ೧೦೦ ಎಕರೆ ಪ್ರದೇಶದ ಅರಣ್ಯವು ಬೆಂಕಿಗಾಹುತಿಯಾಗಿರುವ ಘಟನೆ ತಾಲ್ಲೂಕಿನ ಕೆ.ಮುತ್ತುಕದಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ.ಮುತ್ತುಕದಹಳ್ಳಿ ಗ್ರಾಮದಲ್ಲಿ ವೃಕ್ಷಬೆಳೆಗಾರರ ಸಂಘ (ಗುಜರಾತ್) ವತಿಯಿಂದ ಸಂರಕ್ಷಣೆ ಮಾಡಲಾಗಿದ್ದ ಅರಣ್ಯಕ್ಕೆ ಕಿಡಿಗೇಡಿಗಳು ಗುರುವಾರ ಮದ್ಯಾಹ್ನ ಬೆಂಕಿ ಹಚ್ಚಿರುವ ಹಿನ್ನಲೆಯಲ್ಲಿ ನೂರಾರು ಮರಗಳು ಬೆಂಕಿಗಾಹುತಿಯಾಗಿದೆ.
ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಭೇಟಿ ನೀಡಿ ನಾಗರಿಕರ ಸಹಕಾರದೊಂದಿಗೆ ಬೆಂಕಿ ನಂದಿಸಿದ್ದಾರೆ.

error: Content is protected !!