Home News ಬೆಳೆನಷ್ಟ ಪರಿಹಾರ ಶೀಘ್ರವಾಗಿ ನೀಡುವಂತೆ ರೈತರ ಒತ್ತಾಯ

ಬೆಳೆನಷ್ಟ ಪರಿಹಾರ ಶೀಘ್ರವಾಗಿ ನೀಡುವಂತೆ ರೈತರ ಒತ್ತಾಯ

0

ಕಳೆದ ತಿಂಗಳು ಬಿದ್ದಂತಹ ಅಕಾಲಿಕ ಮಳೆಯಿಂದಾಗಿ ನಷ್ಟಕ್ಕೆ ಒಳಗಾಗಿರುವ ರಾಗಿ ಬೆಳೆಯು ಸೇರಿದಂತೆ ಇತರೆ ಬೆಳೆಗಳಿಗೆ ನಷ್ಟಪರಿಹಾರವನ್ನು ತ್ವರಿತವಾಗಿ ವಿತರಣೆ ಮಾಡುವಂತೆ ಒತ್ತಾಯಿಸಿ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆಯ (ಪುಟ್ಟಣ್ಣಯ್ಯ ಬಣ) ಪದಾಧಿಕಾರಿಗಳು ತಾಲ್ಲೂಕು ಕಚೇರಿಯ ಮುಂದೆ ಮಂಗಳವಾರ ಧರಣಿ ನಡೆಸಿದರು.
ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಬಿದ್ದಂತಹ ಅಕಾಲಿಕ ಮಳೆಯಿಂದಾಗಿ ರೈತರಿಗೆ ಲಕ್ಷಾಂತರ ರೂಪಾಯಿಗಳ ಬೆಳೆಗಳು ನಷ್ಟವಾಗಿವೆ, ಪರಿಹಾರವನ್ನು ವಿತರಣೆ ಮಾಡುವಂತೆ ದಾಖಲೆಗಳನ್ನು ನೀಡಿದ್ದಾರೆ, ಆದರೆ ಇದುವರೆಗೂ ಒಂದೇ ಒಂದು ಬಿಡಿಗಾಸು ಪರಿಹಾರ ವಿತರಣೆಯಾಗಿಲ್ಲ, ರಾಗಿ ಬೆಳೆಯೂ ಸೇರಿದಂತೆ ತರಕಾರಿ ಬೆಳೆಗಳು, ಹೂವಿನ ಬೆಳೆಗಳು, ನಾಶವಾಗಿವೆ. ಮನೆಗಳು ಕುಸಿದುಬಿದ್ದು ಅಪಾರ ಪ್ರಮಾಣದಲ್ಲಿ ನಷ್ಟವಾಗಿದ್ದು, ಸರ್ಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು, ಬಿದ್ದು ಹೋಗಿರುವ ಮನೆಗಳಿಗೆ ಅನುದಾನಗಳನ್ನು ನೀಡಿ ಮನೆಗಳ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿ ತಹಶೀಲ್ದಾರರ ಮೂಲಕ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ರೈತ ಸಂಘದ ಜಿಲ್ಲಾ ಸಂಚಾಲಕ ಹುಸೇನ್ಸಾಬ್, ತಾಲ್ಲೂಕು ಅಧ್ಯಕ್ಷ ಎಸ್.ಎಂ. ರವಿಪ್ರಕಾಶ್, ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ಮುನಿಕೆಂಪಣ್ಣ, ಹಿತ್ತಲಹಳ್ಳಿ ದೇವರಾಜು, ಮೌಲಾ, ಡಿ.ಸಿ.ರಮೇಶ್, ಎಂ.ಬಿ.ಬೈರೇಗೌಡ, ಕೆ.ಎನ್.ಮಂಜುನಾಥ್, ದ್ಯಾವಪ್ಪನಗುಡಿ ನಾರಾಯಣಸ್ವಾಮಿ, ಚಿಕ್ಕದಾಸೇನಹಳ್ಳಿ ಮುನೇಗೌಡ, ವೆಂಕಟರೆಡ್ಡಿ, ಎಸ್.ಎನ್. ಮಾರಪ್ಪ, ಡಿ.ವಿ.ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.