Home News ಬೇಸಿಗೆ ರಜೆಯ ಉಚಿತ ಕರಾಟೆ ಕಲಿಕಾ ಶಿಬಿರಕ್ಕೆ ಚಾಲನೆ

ಬೇಸಿಗೆ ರಜೆಯ ಉಚಿತ ಕರಾಟೆ ಕಲಿಕಾ ಶಿಬಿರಕ್ಕೆ ಚಾಲನೆ

0

ಹೆಣ್ಣು ಮಕ್ಕಳು ಪ್ರತಿಕ್ಷಣ ಆತಂಕದಲ್ಲಿ ಬದುಕು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು ಪ್ರತಿಯೊಬ್ಬ ಮಗುವೂ ಸ್ವಯಂ ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳಲು ಇಂತಹ ಉಚಿತ ಶಿಬಿರಗಳು ಸಹಕಾರಿಯಾಗಲಿವೆ ಎಂದು ಕರಾಟೆ ಶಿಕ್ಷಕ ಅರುಣ್ಕುಮಾರ ತಿಳಿಸಿದ್ದಾರೆ.
ದಿವ್ಯಭಾರತ್ ಕರಾಟೆ ಡೊ ಅಸೋಸಿಯೇಷನ್ ವತಿಯಿಂದ ನಗರದ ಅಶೋಕ ರಸ್ತೆಯಲ್ಲಿರುವ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ೬ ದಿನಗಳ ಉಚಿತ ಸ್ವಯಂ ರಕ್ಷಣೆ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳು ಸ್ವಯಂ ರಕ್ಷಣೆ ಹೇಗೆಲ್ಲ ಮಾಡಿಕೊಳ್ಳಬೇಕು, ಯಾವ ಸಂದರ್ಭದಲ್ಲಿ ಪ್ರತಿರೋಧ ತೋರಬೇಕು, ಅಪಾಯಕರ ಸಂದರ್ಭಗಳನ್ನು ಹೇಗೆಲ್ಲಾ ಎದುರಿಸಬೇಕು ಎಂಬುದನ್ನು ಶಿಬಿರದಲ್ಲಿ ತಿಳಿಸಿಕೊಡಲಾಗುವುದು ಎಂದರು.
ಆರ್ಥಿಕವಾಗಿ ಸುಧಾರಿಸಿರುವವರು ತಮ್ಮ ಮಕ್ಕಳಿಗೆ ವಿವಿಧ ತರಬೇತಿಗಳನ್ನು ಹಣ ಕಟ್ಟಿ ಕಲಿಸುತ್ತಾರೆ. ಆದರೆ ಗ್ರಾಮೀಣ ಭಾಗದ ಬಡವರ ಮಕ್ಕಳು ಇಂತಹ ತರಬೇತಿಗಳಿಂದ ದೂರ ಉಳಿಯಬಾರದು ಎನ್ನುವ ಉದ್ದೇಶದಿಂದ ೬ ದಿನಗಳ ಕಾಲ ಉಚಿತ ತರಬೇತಿ ಶಿಬಿರ ಆಯೋಜಿಸಲಾಗಿದ್ದು ಪ್ರತಿಯೊಬ್ಬ ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಾಲೀಬಾಲ್ ಕ್ರೀಡಾಪಟು ಮುನಿರಾಜು, ಕಲಾವಿದ ಮುನಿರಾಜು ಹಾಜರಿದ್ದರು.