ಮಕ್ಕಳಲ್ಲಿ ವಿಜ್ಞಾನ ವಿಷಯದಲ್ಲಿ ಕಲಿಕಾಸಕ್ತಿಯನ್ನು ವೃದ್ಧಿಸಿಕೊಳ್ಳಬೇಕು. ಮೌಢ್ಯಗಳ ಆಚರಣೆಯು ಇನ್ನೂ ಜೀವಂತವಾಗಿರುವುದರಿಂದ ಅವುಗಳನ್ನು ಹೋಗಲಾಡಿಸಲು ಮಕ್ಕಳದಿಸೆಯಿಂದಲೇ ವೈಜ್ಞಾನಿಕ ಮನೋಭಾವನೆಯನ್ನು ವೃದ್ಧಿಸಬೇಕು ಎಂದು ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಎಚ್.ಎಸ್.ರುದ್ರೇಶಮೂರ್ತಿ ತಿಳಿಸಿದರು.
ತಾಲ್ಲೂಕಿನ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲಿಕೆಗೆ ಕಠಿಣ ವಿಷಯಗಳೆಂದು ಭಾವಿಸಿ ಗಣಿತ, ವಿಜ್ಞಾನ, ಇಂಗ್ಲೀಷ್ ವಿಷಯಗಳತ್ತ ಮಕ್ಕಳು ಆಸಕ್ತಿ ತೋರದೇ ನಿರ್ಲಕ್ಷ್ಯ ತೋರುವುದರಿಂದ ಭವಿಷ್ಯದಲ್ಲಿ ಕಷ್ಟಕ್ಕೊಳಗಾಗುತ್ತಾರೆ. ಕಠಿಣ ವಿಷಯಗಳ ಕಲಿಕೆಗೆ ಪೂರಕ ವಾತಾವರಣವನ್ನು ಸೃಜಿಸುವ ಕಾರ್ಯವಾಗಬೇಕಿದೆ ಎಂದು ಅವರು ತಿಳಿಸಿದರು.
ಚಿತ್ರದುರ್ಗದ ಚಿಂತನ ಪ್ರಕಾಶನದ ವತಿಯಿಂದ ನಡೆದ ವಿಜ್ಞಾನ ಚಿಂತನ ಪರೀಕ್ಷೆಯಲ್ಲಿ ರ್ಯಾಂ ಕ್ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಪದಕಗಳನ್ನು ಪ್ರಧಾನ ಮಾಡಲಾಯಿತು. ಕಲಿಕೋತ್ಸವದ ಅಂಗವಾಗಿ ನಡೆದ ಓದು, ಬರಹ, ಅಭಿವ್ಯಕ್ತಿ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಪ್ರಶಸ್ತಿಪತ್ರ ಮತ್ತು ಬಹುಮಾನಗಳನ್ನು ವಿತರಿಸಲಾಯಿತು.
ಎಸ್ಡಿಎಂಸಿ ಅಧ್ಯಕ್ಷ ಎಸ್.ಆರ್.ನಾಗೇಶ್, ಎಸ್ಡಿಎಂಸಿ ಸದಸ್ಯ ಶಂಕರಪ್ಪ, ಎನ್.ಪಿ.ನಾಗರಾಜಪ್ಪ, ಉದ್ಯಮಿ ಸತೀಶ್, ಎಸ್.ವಿ.ನಾರಾಯಣಸ್ವಾಮಿ, ಎಸ್.ಟಿ.ಬಚ್ಚೇಗೌಡ, ಮುನಿಕೃಷ್ಣಪ್ಪ ಮತ್ತಿತರರು ಹಾಜರಿದ್ದರು.
ಪ್ರಥಮ ರ್ಯಾಂರಕ್: ಚಿತ್ರದುರ್ಗ ಚಿಂತನ ಪ್ರಕಾಶನವು ನಡೆಸಿದ ವಿಜ್ಞಾನ ಚಿಂತನ ಪರೀಕ್ಷೆಯಲ್ಲಿ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ೮ ನೇ ತರಗತಿ ವಿದ್ಯಾರ್ಥಿನಿ ಎಸ್.ಎನ್.ರಕ್ಷಿತಾ ರಾಜ್ಯ ಮಟ್ಟದ ಪ್ರಥಮ ರ್ಯಾಂ್ಕ್ ಪಡೆದಿದ್ದಾರೆ. ೭ ನೇ ತರಗತಿಯ ಎಸ್.ಎಂ.ಅಜಯ್ ಜಿಲ್ಲಾ ಮಟ್ಟದ ಪ್ರಥಮ ರ್ಯಾಂಾಕ್, ೬ ನೇ ತರಗತಿಯ ಎಸ್.ಎ.ಮಧುಮತಿ ತಾಲ್ಲೂಕು ಮಟ್ಟದ ಪ್ರಥಮ ರ್ಯಾಂೇಕ್ ಗಳಿಸಿದ್ದಾರೆ. ಇನ್ನುಳಿದಂತೆ ೨೩ ಮಂದಿ ವಿದ್ಯಾರ್ಥಿಗಳು ಶಾಲಾ ಮಟ್ಟದ ರ್ಯಾಂನಕ್ಗಳನ್ನು ಗಳಿಸಿದ್ದಾರೆ.