Home News ಮನೆಯಲ್ಲಿ ಅವಿತಿದ್ದ ನಾಗರಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡು ಸೇರಿಸಿದ ಸ್ನೇಕ್‌ ನಾಗರಾಜ್

ಮನೆಯಲ್ಲಿ ಅವಿತಿದ್ದ ನಾಗರಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡು ಸೇರಿಸಿದ ಸ್ನೇಕ್‌ ನಾಗರಾಜ್

0

ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮದ ಹರಿಜನ ಕಾಲೋನಿಯ ಗಂಗಲಪ್ಪ ಎಂಬುವರ ಮನೆಯಲ್ಲಿ ಸೇರಿಕೊಂಡಿದ್ದ ಭಾರೀಗಾತ್ರದ ನಾಗರಹಾವನ್ನು ಶುಕ್ರವಾರ ಕೊತ್ತನೂರಿನ ಸ್ನೇಕ್‌ ನಾಗರಾಜ್‌ ಹೊರತೆಗೆದು ಸುರಕ್ಷಿತವಾಗಿ ಕಾಡಿನಲ್ಲಿ ಬಿಟ್ಟರು.
ಸುಮಾರು ಹದಿನೈದು ದಿನಗಳ ಹಿಂದಷ್ಟೆ ಹರಿಜನ ಕಾಲೋನಿಯ ವಾಸಿ ಮಹೇಶ್‌(16) ಹಾವು ಕಡಿದು ಮೃತಪಟ್ಟಿದ್ದರಿಂದ ನಾಗರಹಾವು ಮನೆಯೊಳಗೆ ಸೇರಿಕೊಂಡಾಗ ಎಲ್ಲರೂ ಗಾಬರಿ ಬಿದ್ದು ಓಡಿದೆವು. ಕೊತ್ತನೂರಿನ ಸ್ನೇಕ್‌ ನಾಗರಾಜ್‌ ಬಂದು ಹಾವನ್ನು ಮನೆಯಿಂದ ಹೊರಕ್ಕೆ ತೆಗೆದುಕೊಂಡು ಬಂದರು. ನಮ್ಮ ಕಾಲೋನಿಯ ಪಕ್ಕದಲ್ಲೇ ಕಾಲುವೆಯೊಂದಿದ್ದು ಕಲುಷಿತ ಹಾಗೂ ತ್ಯಾಜ್ಯದಿಂದ ತುಂಬಿಹೋಗಿದೆ. ಅದರ ಪಕ್ಕದಲ್ಲೇ ಗಿಡಗಂಟೆಗಳು ಬೆಳೆದಿದ್ದು ಹಾವುಗಳು ಸೇರಿಕೊಳ್ಳುತ್ತವೆ. ಪಂಚಾಯಿತಿ ಅಧಿಕಾರಿಗಳಿಗೆ ಎಷ್ಟು ಬಾರಿ ಹೇಳಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗಂಗುಲಪ್ಪ ದೂರಿದರು.