Home News ಮಹಾರಾಷ್ಟ್ರದ ಖಂಡಾಲದಲ್ಲಿ ನಡೆದ ಕೂಡೋ ಅಂತಾರಾಷ್ಟ್ರೀಯ ಶಿಬಿರದಲ್ಲಿ ಜಿಲ್ಲೆಯ 19 ವಿದ್ಯಾರ್ಥಿಗಳು

ಮಹಾರಾಷ್ಟ್ರದ ಖಂಡಾಲದಲ್ಲಿ ನಡೆದ ಕೂಡೋ ಅಂತಾರಾಷ್ಟ್ರೀಯ ಶಿಬಿರದಲ್ಲಿ ಜಿಲ್ಲೆಯ 19 ವಿದ್ಯಾರ್ಥಿಗಳು

0

ಮಹಾರಾಷ್ಟ್ರದ ಖಂಡಾಲದ ಡಿ.ಸಿ.ಹೈಸ್ಕೂಲ್ನಲ್ಲಿ ನಡೆದ ಎರಡನೇ ಕೂಡೋ ಅಂತಾರಾಷ್ಟ್ರೀಯ ಶಿಬಿರದಲ್ಲಿ ಜಿಲ್ಲೆಯ 19 ವಿದ್ಯಾರ್ಥಿಗಳು ರಾಜ್ಯದಿಂದ ಪ್ರತಿನಿಧಿಸಿದ್ದು, ಶಿಬಿರಾಂತ್ಯದಲ್ಲಿ ನಡೆದ ಸ್ಪರ್ಧೆಯಲ್ಲಿ ಪದಕಗಳನ್ನು ಪಡೆದಿದ್ದಾರೆ. ನಗರದ ಕೂಡೋ ಕರಾಟೆ ಶಿಕ್ಷಕ ಹಾಗೂ ಕೆ.ಐ.ಎಫ್.ಐ ರಾಜ್ಯ ಪ್ರತಿನಿಧಿ ಮಹಮ್ಮದ್ ಜಬೀವುಲ್ಲಾ ನೇತೃತ್ವದಲ್ಲಿ ತಂಡ ತೆರಳಿತ್ತು.
ಎಚ್.ಜಿ.ವಿಶಾಲ್ ಚಿನ್ನದ ಪದಕವನ್ನು ಪಡೆದರೆ, ಬಿ.ಸುಬ್ರಮಣ್ಯ ಮತ್ತು ರೋಹಿತೇಶ್ವರ್ ಬೆಳ್ಳಿ ಪದಕವನ್ನು ಪಡೆದಿದ್ದಾರೆ. ಟಿ.ಎನ್.ಹೇಮಂತ್, ಕೆ.ನರೇಂದ್ರಬಾಬು ಮತ್ತು ಎಂ.ಅಂಕಿತ್ ಹಯಕ್ ಕಂಚಿನ ಪದಕವನ್ನು ಪಡೆದಿದ್ದಾರೆ. ಎಚ್.ಉಮೇಶ್, ಬಿ.ಎ.ತೇಜಸ್, ಓಂ ದೇಶಮುದ್ರೆ, ಓಂಕಾರ್.ಎಸ್.ಆಚಾರ್, ಜಿಶಾನ್ ಸಿದ್ದಿಕಿ, ಮೊಹಮ್ಮದ್ ರೆಹಾನ್, ಸಯ್ಯದ್ ಮೂಯಿಜ್ ಪಾಷ, ಮೊಹಮ್ಮದ್ ಬಕ್ಷಿ, ಶೋಯಬ್ ಬಕ್ಷಿ, ಸಮೀರ್ ಪಾಷ, ನಿತೀಶ್ ಕುಮಾರ್, ಸಚಿನ್ ಪ್ರಶಸ್ತಿಪತ್ರವನ್ನು ಪಡೆದಿದ್ದಾರೆ.
ಏಳು ದಿನಗಳ ಕಾಲ ನಡೆದ ಎರಡನೇ ಕೂಡೋ ಅಂತಾರಾಷ್ಟ್ರೀಯ ಶಿಬಿರದಲ್ಲಿ ಕರಾಟೆ ಇಂಟರ್ ನ್ಯಾಷನಲ್ ಫೆಡರೇಷನ್ ಇಂಡಿಯಾ ಅಧ್ಯಕ್ಷ ಸೋಶಿಹಾನ್ ಮೆಹುಲ್ ವೋರಾ, ಪ್ರಧಾನ ಕಾರ್ಯದರ್ಶಿ ರೆನ್ಶಿ ವಿಸ್ಪಿ ಬಿ.ಕಸದ್, ನಿರ್ದೇಶಕ ಶಿಹಾನ್ ಪರ್ಸಿ ಬಹ್ಮನಿ ತರಬೇತಿ ನೀಡಿದರು.