Home News ಮಾನವೀಯತೆಯ ಉಳಿವಿಗಾಗಿ ಮನವಿ

ಮಾನವೀಯತೆಯ ಉಳಿವಿಗಾಗಿ ಮನವಿ

0

ಮಾನವೀಯತೆಯನ್ನು ಉಳಿಸಬೇಕು ಮತ್ತು ರಾಷ್ಟ್ರಮಟ್ಟದಲ್ಲಿ ಆಗುತ್ತಿರುವ ಅನ್ಯಾಯ ಹಾಗೂ ಅತ್ಯಾಚಾರ ಪ್ರಕರಣಗಳಿಗೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ವಿವಿಧ ಮುಸ್ಲಿಂ ಸಂಘಟನೆಗಳು ಶುಕ್ರವಾರ ತಹಶೀಲ್ದಾರ್ ಎಂ.ದಯಾನಂದ್ ಅವರಿಗೆ ಮನವಿ ಸಲ್ಲಿಸಿದರು.
ರಾಷ್ಟ್ರ ಮತ್ತು ರಾಜ್ಯಗಳಲ್ಲಿ ಆಗುತ್ತಿರುವ ಅನ್ಯಾಯ ಅಕ್ರಮಗಳಿಗೆ ಕಡಿವಾಣ ಹಾಕಲು ಹೊಸ ಕಾನೂನು ಜಾರಿ ಮಾಡಬೇಕು. ಉತ್ತರ ಪ್ರದೇಶದ ಉನ್ನಾವ್, ರಾಜ್ಯದ ಪುತ್ತೂರು ಮತ್ತು ತೆಲಂಗಾಣದಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನಡೆದಿದೆ. ಉತ್ತರಪ್ರದೇಶದಲ್ಲಿ, ಗುಂಡ್ಲುಪೇಟೆಯಲ್ಲಿ, ಜಾರ್ಖಂಡ್, ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಗುಂಪುಗೂಡಿ ಹಲ್ಲೆ, ಕೊಲೆ ಮುಂತಾದ ಅಮಾನವೀಯ ಘಟನೆಗಳು ಜರುಗಿವೆ. ಧರ್ಮ, ದೇಶಪ್ರೇಮದ ಹೆಸರಿನಲ್ಲಿ ಹಲ್ಲೆ, ದೌರ್ಜನ್ಯ ನಡೆದಿದೆ. ದೇಶದ ಪವಿತ್ರ ಸ್ಥಳ ಸಂಸತ್ ಭವನದಲ್ಲಿ ವಿವಿಧ ಸಂಸದರು ಧರ್ಮದ ಘೋಷಣೆಗಳನ್ನು ಮಾಡುವ ಮೂಲಕ ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸಿದ್ದಾರೆ.
ಎಲ್ಲಾ ರಾಜ್ಯದ ರಾಜ್ಯಪಾಲರುಗಳು ಹಾಗೂ ರಾಷ್ಟ್ರಪತಿಯವರು ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಬೇಕು ಎಂದು ಕೋರಿ ಮನವಿಯನ್ನು ಸಲ್ಲಿಸಿದರು.
ಜಾಮಿಯಾ ಮಸೀದಿ ಅಧ್ಯಕ್ಷ ಸಯ್ಯದ್ ತಾಜ್ ಪಾಷ, ಉಪಾಧ್ಯಕ್ಷ ಅಮೀರ್ ಜಾನ್, ಕಾರ್ಯದರ್ಶಿ ಎಸ್.ಹೈದರ್ ವಲೀ ಪಾಷ, ಟಿಪ್ಪು ಸುಲ್ತಾನ್ ಸಂಘರ್ಷ ಸಮಿತಿಯ ಅಧ್ಯಕ್ಷ ಮೌಲಾ, ಯೂನಿಟಿ ಸಿಲ್ ಸಿಲಾ ಅಕ್ರಂಪಾಷ, ಮೇಲೂರು ಅಜೀಜ್, ಎಚ್.ಎಸ್.ಫಯಾಜ್, ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಮುಕಂಮಿಲ್, ಯಾರಬ್ ಪಾಷ, ಬಾಬು ಹುಸೇನ್ ಹಾಜರಿದ್ದರು.

error: Content is protected !!