Home News ಯಾವುದೇ ಸಮಸ್ಯೆಗೂ ಪರಿಹಾರವಿರುತ್ತದೆ

ಯಾವುದೇ ಸಮಸ್ಯೆಗೂ ಪರಿಹಾರವಿರುತ್ತದೆ

0

ಸಮಾಜದಲ್ಲಿ ಎದುರಾಗುವ ಯಾವುದೇ ಸಮಸ್ಯೆಗೂ ಪರಿಹಾರವಿರುತ್ತದೆ. ಪರಿಹಾರವನ್ನು ಹುಡುಕುವ ನಿಟ್ಟಿನಲ್ಲಿ ಯೋಚಿಸುವ ಮನಸ್ಸುಗಳು ಒಂದುಗೂಡಬೇಕು. ಆಗ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎಂದು ಭಾರತ ರಕ್ಷಣಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಭರತ್‌ ಶೆಟ್ಟಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಭಾರತ ರಕ್ಷಣಾ ವೇದಿಕೆ ಶಿಡ್ಲಘಟ್ಟ ಶಾಖೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅವರು ಮಾತನಾಡಿದರು.
ಪ್ರಸ್ತುತ ಸಮಾಜದಲ್ಲಿ ಸಂಘಟನೆಗಳು ಬಹಳಷ್ಟಿವೆ. ಎಲ್ಲಾ ಸಂಘಟನೆಗಳ ಧ್ಯೇಯೋದ್ಧೇಶ ಬಹುತೇಕ ಒಂದೇ ಆಗಿದ್ದರೂ ಹತ್ತು ಹಲವಾರು ಕವಲುಗಳಂತೆ ಬಿಡಿಬಿಡಿಯಾಗಿವೆ. ಆದರೆ ಸಾಮಾಜಿಕ ಕಳಕಳಿ, ಬದ್ಧತೆ, ಸೇವೆ, ಪರಿಸರ ಕಾಳಜಿ ಹಾಗೂ ಪರಿಶುದ್ಧತೆ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಈ ಎಲ್ಲಾ ಗುಣಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಸಂಘಟನೆ ಯಶಸ್ವಿಯಾಗುತ್ತದೆ ಮತ್ತು ಸಾಫಲ್ಯ ಹೊಂದುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಾರತ ರಕ್ಷಣಾ ವೇದಿಕೆ ಶಿಡ್ಲಘಟ್ಟ ಶಾಖೆಯ ಅಧ್ಯಕ್ಷರನ್ನಾಗಿ ಮಾಣಿಕ್ಯ ಅವರನ್ನು ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳಾಗಿ ಡಿ.ಎನ್‌.ನವೀನ್‌ಕುಮಾರ್‌, ಡಿ.ಸುನಿಲ್‌ ಕುಮಾರ್‌, ಡಿ.ವಿ.ಶ್ರೀನಿವಾಸ, ಡಿ.ಜಿ.ಮಧು, ಓ.ಸಿ.ಮೋಹನ್‌, ಮನೋಹರ ಅವರನ್ನು ಆಯ್ಕೆ ಮಾಡಲಾಯಿತು.
ಭಾರತ ರಕ್ಷಣಾ ವೇದಿಕೆಯ ಹರೀಶ್‌, ದೇವರಾಜು, ನವನೀತ್‌ಶೆಟ್ಟಿ, ರಘು, ಕುಮಾರಗೌಡ, ರಾಜೇಶ್‌, ಸಂಜೀವ ಮೂರ್ತಿ, ಮಂಜುನಾಥ ಹಾಜರಿದ್ದರು.