Home News ಯೂನಿಟಿ ಸಿಲ್ಸಿಲಾ ವತಿಯಿಂದ ರಕ್ತದಾನ ಶಿಬಿರ

ಯೂನಿಟಿ ಸಿಲ್ಸಿಲಾ ವತಿಯಿಂದ ರಕ್ತದಾನ ಶಿಬಿರ

0

ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪ್ರತಿ ವರ್ಷವೂ ಯೂನಿಟಿ ಸಿಲ್ಸಿಲಾ ಫೌಂಡೇಷನ್ ರಕ್ತದಾನ ಶಿಬಿರವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಸ್ವಯಂ ಪ್ರೇರಿತ ರಕ್ತದಾನ ಮಾಡುವುದರಿಂದ ಅಪಾಯದಲ್ಲಿರುವ ಜೀವಗಳನ್ನು ರಕ್ಷಣೆ ಮಾಡಲು ಸಾಧ್ಯವಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ವಿ. ಮುನಿಯಪ್ಪ ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಭಾನುವಾರ ಯೂನಿಟಿ ಸಿಲ್ಸಿಲಾ ಫೌಂಡೇಷನ್ ಹಾಗೂ ಭಾರತೀಯ ರೆಡ್ಕ್ರಾಸ್ ಸೊಸೈಟಿಯ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ನಾಲ್ಕನೇ ವರ್ಷದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದಾಗಬೇಕು ಇದರಿಂದ ಅಪಘಾತಗಳು, ಹೆರಿಗೆ ಮುಂತಾದ ಸನ್ನಿವೇಶಗಳಲ್ಲಿ ಆಸ್ಪತ್ರೆಗೆ ಬರುವಂತಹ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.
ಸಾರ್ವಜನಿಕ ಆಸ್ಪತ್ರೆಯ ಡಾ. ವಿಜಯ್ ಅವರು ಮಾತನಾಡಿ, ರಕ್ತದ ಬಗ್ಗೆ, ರಕ್ತದಾನ ಮಾಡುವುದರಿಂದ ಅಗುವ ಉಪಯೋಗಗಳ ಬಗ್ಗೆ ವಿವರವಾಗಿ ತಿಳಿಸಿದರು. ಕಳೆದ ವರ್ಷ ಯೋನಿಟಿ ಸಿಲ್ಸಿಲಾ ವತಿಯಿಂದ ಅತಿ ಹೆಚ್ಚು ಯೂನಿಟಿ ರಕ್ತದಾನ ಮಾಡಲಾಗಿದ್ದು ಈ ವರ್ಷವೂ ಸಹ ಹೆಚ್ಚಿನ ರಕ್ತ ಶೇಖರಣೆಯಾಗಿ ರೋಗಿಗಳಿಗೆ ಉಪಯೋಗವಾಗಲಿ ಎಂದು ಹಾರೈಸಿದರು.
ಯೂನಿಟಿ ಸಿಲ್ಸಿಲಾ ಫೌಂಡೇಷನ್ ಅಧ್ಯಕ್ಷ ಮೊಹಮ್ಮದ್ ಅಸದ್ ಮಾತನಾಡಿ, ಜಾತಿ, ಮತ, ಧರ್ಮಗಳನ್ನು ಮೀರಿ ರಕ್ತದಾನ ಮಾಡುವುದರಿಂದ ಅನೇಕ ಮಂದಿಯನ್ನು ಪ್ರಾಣಾಪಾಯದಿಂದ ಪಾರು ಮಾಡಲು ಸಹಕಾರಿಯಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರ ಮೆದುಳು, ಹೃದಯ, ಹಾಗೂ ಎಲ್ಲಾ ಅಂಗಾಂಗಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತವೆ. ಈ ಬಾರಿ ರಕ್ತದಾನ ಶಿಬಿರದೊಡನೆ ರಕ್ತದಾನದ ಕುರಿತು ಜನಜಾಗೃತಿಯನ್ನು ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ವೀಕೇರ್ ಫೌಂಡೇಶನ್, ಇಲವೆನ್ ಸ್ಟಾರ್ ಫೌಂಡೇಶನ್, ಟಿಪ್ಪು ಸೆಕ್ಯುಲಾರ್ ಸೇನಾ ಯುವಕರು ರಕದತದಾನ ಶಿಬಿರದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಿದರು. ಶಿಬಿರದಲ್ಲಿ ರಕ್ತದಾನ ಮಾಡಿದ ನಾಗರಿಕರಿಗೆ ಹಣ್ಣು, ಹಣ್ಣಿನ ರಸ್ ಮತ್ತು ಪ್ರಮಾಣಪತ್ರಗಳನ್ನು ವಿತರಣೆ ಮಾಡಲಾಯಿತು.
ಜಾಮಿಯಾ ಮಸೀದಿ ಅಧ್ಯಕ್ಷ ತಾಜ್ ಪಾಷ, ಮದೀನಾ ಮಸೀದಿಯ ಎಚ್.ಎಸ್.ಫಯಾಜ್, ಸುಬ್ರ್ಯಮಣಿ, ಗೋವಿಂದರಾಜು, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಗುರುರಾಜರಾವ್, ರವಿ, ಯೂನಿಟಿ ಸಿಲ್ಸಿಲಾ ಪೌಂಡೇಶನ್ನ ಗೌರವಾಧ್ಯಕ್ಷ ಮೊಹಮ್ಮದ್ ಖಾಸಿಂ, ಅಧ್ಯಕ್ಷ ಅಸದ್, ಉಪಾಧ್ಯಕ್ಷ ಅಕ್ರಂಪಾಷ, ಕಾರ್ಯದರ್ಶಿ ಇಂತಿಯಾಜ್ ಪಾಷ, ಅಕ್ರಮ್, ರಹಮತ್, ತೋಫಿಕ್, ವಸೀಮ್, ಮುದಸ್ಸಿರ್, ಜಬಿ, ಅಮೀರ್ ಈ ಸಂದರ್ಭದಲ್ಲಿ ಹಾಜದ್ದರು.