Home News ಯೋಗ್ಯನಿಗೆ ಬಿಫಾರಂ ನೀಡಿದ್ದೇನೆ, ಬೆಂಬಲಿಸಿ – ಎಚ್‌.ಡಿ.ದೇವೇಗೌಡ

ಯೋಗ್ಯನಿಗೆ ಬಿಫಾರಂ ನೀಡಿದ್ದೇನೆ, ಬೆಂಬಲಿಸಿ – ಎಚ್‌.ಡಿ.ದೇವೇಗೌಡ

0

ರವಿಯಂತಹ ಯೋಗ್ಯ ಹುಡುಗನನ್ನು ನಿಮ್ಮ ಕ್ಷೇತ್ರಕ್ಕೆ ಕೊಟ್ಟಿದ್ದೇನೆ. ಇವನು ನಿಮ್ಮ ಮಗ. ನೀವೇ ಮುಂದೆ ನಿಂತು ರವಿಯನ್ನು ಗೆಲ್ಲಿಸಬೇಕು ಎಂದು ಜೆಡಿಎಸ್‌ ರಾಷ್ಟ್ರಾಧ್ಯಕ್ಷ ಎಚ್‌.ಡಿ.ದೇವೇಗೌಡ ತಿಳಿಸಿದರು.
ನಗರದ ದಿಬ್ಬೂರಹಳ್ಳಿ ರಸ್ತೆಯ ಬಾಷುಸಾಬ್‌ ದರ್ಗಾ ಬಳಿ ಮಂಗಳವಾರ ನಡೆಸಿದ ಜೆಡಿಎಸ್‌ ಸಮಾವೇಶದಲ್ಲಿ ಜನರನ್ನುದ್ದೇಶಿಸಿ ಅವರು ಮಾತನಾಡಿದರು.
ಈ ಬೃಹತ್‌ ಸಮಾವೇಶದಲ್ಲಿ ಇಷ್ಟೊಂದು ಜನರನ್ನು ನೋಡಿ ನನಗೆ ಸಂತೋಷವಾಗುತ್ತಿದೆ. ನನ್ನ ಮನಸ್ಸಿಗೆ ಸಮಾಧಾನವಿದೆ. ನಮ್ಮೆಲ್ಲಾ ಮುಖಂಡರಿಗೆ ಕೊಟ್ಟಿದ್ದ ಮಾತನ್ನು ನೆರವೇರಿಸಿದ್ದೇನೆ. ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿರುವ ರವಿಯನ್ನು ನೀವು ಗೆಲ್ಲಿಸಿಕೊಡಬೇಕು. ಎದುರಾಳಿಗಳು ಡಿಪಾಸಿಟ್‌ ಕಳೆದುಕೊಳ್ಳುವಂತೆ ನೀವು ರವಿಯನ್ನು ಬೆಂಬಲಿಸಿ ಎಂದು ಹೇಳಿದರು.
ಈ ಬೃಹತ್‌ ಸಮಾವೇಶದಲ್ಲಿ ಇಷ್ಟೊಂದು ಜನರನ್ನು ನೋಡಿ ನನಗೆ ಸಂತೋಷವಾಗುತ್ತಿದೆ. ನನ್ನ ಮನಸ್ಸಿಗೆ ಸಮಾಧಾನವಿದೆ. ನಮ್ಮೆಲ್ಲಾ ಮುಖಂಡರಿಗೆ ಕೊಟ್ಟಿದ್ದ ಮಾತನ್ನು ನೆರವೇರಿಸಿದ್ದೇನೆ. ರವಿಯಂತಹ ಯೋಗ್ಯ ಹುಡುಗನನ್ನು ನಿಮ್ಮ ಕ್ಷೇತ್ರಕ್ಕೆ ಕೊಟ್ಟಿದ್ದೇನೆ. ಇವನು ನಿಮ್ಮ ಮಗ. ನೀವೇ ಮುಂದೆ ನಿಂತು ರವಿಯನ್ನು ಗೆಲ್ಲಿಸಬೇಕು. ಎಲ್ಲರ ಪ್ರೀತಿ ವಿಶ್ವಾಸವನ್ನು ಗಳಿಸಿರುವ ರವಿಯನ್ನು ನೀವು ಗೆಲ್ಲಿಸಿಕೊಡಬೇಕು. ಎದುರಾಳಿಗಳು ಡಿಪಾಸಿಟ್‌ ಕಳೆದುಕೊಳ್ಳುವಂತೆ ನೀವು ರವಿಯನ್ನು ಬೆಂಬಲಿಸಿ ಎಂದರು.
ನನ್ನ ಜೀವಮಾನದಲ್ಲಿ ಯಾರಿಗೂ ಮೋಸ ಮಾಡಿಲ್ಲ. ಕಾಂಗ್ರೆಸ್ಸಿನ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಅವರು ಮುಸ್ಲಿಂ ಸಮುದಾಯದ ಮತಗಳನ್ನು ಗಳಿಸಲು ಕುತಂತ್ರ ರೂಪಿಸಿದ್ದಾರೆ. ಈಚೆಗೆ ನಗರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳುವರೆಂದು ತಿಳಿಸಿದ್ದಾರೆ. ಅದು ಸುಳ್ಳು. ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ, ಸ್ವತಂತ್ರವಾಗಿ ಸರ್ಕಾರ ರಚನೆ ಮಾಡುತ್ತೇವೆ. ಚಿಕ್ಕಬಳ್ಳಾಪುರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಕಾರಣರಾಗಿ ಎಂದು ನುಡಿದರು.
ರೈತಪರ ಚಿಂತನೆ, ಶಾಶ್ವತ ನೀರಾವರಿಗಾಗಿ ನಮ್ಮ ಪಕ್ಷದ ತುಡಿತವಿದೆ. ಅವಿಭಾಜ್ಯ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದಂತೆ ಬಯಲುಸೀಮೆಗೆ ನೀರಿನ ಬವಣೆಯ ಬಗ್ಗೆ ಸ್ಪಷ್ಟವಾದ ಅರಿವಿದೆ. ಶಾಶ್ವತ ನೀರು ತರುವುದೇ ನಮ್ಮ ಮೊದಲ ಆದ್ಯತೆ. ಲಿಂಗಾಯಿತರ ನಡುವೆ ಬಿರುಕನ್ನು ತಂದ ಸಿದ್ದರಾಮಯ್ಯನ ಕಾಂಗ್ರೆಸ್‌ ಹಾಗೂ ಒಳಜಗಳದ ಬಿಜೆಪಿಯಲ್ಲಿ ಹಲವಾರು ಗೊಂದಲಗಳಿವೆ ಎಂದರು
ಹಾಲಿ ಶಾಸಕ ಎಂ.ರಾಜಣ್ಣ ಅವರ ಹೆಸರನ್ನು ಹೇಳದೇ ಅವರ ಬಗ್ಗೆ ಮಾತನಾಡಿದ ಅವರು, ನಮ್ಮಲ್ಲೇ ಇದ್ದವರೂ ಈಗ ಚದುರಂಗದ ಆಟವನ್ನು ಆಡುತ್ತಿರುವುದನ್ನು ಆಟ ಗ್ರಹಿಸುವವರೆಲ್ಲ ಕಾಣಬಹುದಾಗಿದೆ. ಅವರ ಬಗ್ಗೆ ಮಾತನಾಡಲು ನಾನು ಇಷ್ಟಪಡುವುದಿಲ್ಲ. ಆ ನಾಲಾಯಕ್‌, ಅಯೋಗ್ಯನ ಹೆಸರು ಹೇಳಲು ಸಹ ನನಗೆ ಇಷ್ಟವಿಲ್ಲ ಎಂದರು.
ಜೆಡಿಎಸ್‌ ಅಭ್ಯರ್ಥಿ ಬಿ.ಎನ್‌.ರವಿಕುಮಾರ್‌ ಮಾತನಾಡಿ, ಮಹಿಳೆಯರು ಮತ್ತು ಯುವಕರಿಗೆ ಉದ್ಯೋಗ ಸೃಷ್ಟಿ, ದ್ರಾಕ್ಷಿ ಬೆಳೆಗಾರರಿಗೆ ಅನುಕೂಲವಾಗುವ ವೈನ್‌ ಯಾರ್ಡ್‌ ಸ್ಥಾಪನೆ, ರೇಷ್ಮೆಯ ವಿವಿಧ ಉತ್ಪನ್ನಗಳ ತಯಾರಿಕಾ ಕಾರ್ಖಾನೆ, ಹೈನೋದ್ಯಮ ಬಲವರ್ಧನೆ ಮಾಡುವ ಗುರಿಯನ್ನು ಹೊಂದಿದ್ದೇವೆ. ಅಭಿವೃದ್ಧಿಯೇ ನಮ್ಮ ಮಂತ್ರ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಂಕ್‌ ಮುನಿಯಪ್ಪ, ತನುಜ ರಘು, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಪಿ.ವಿ.ನಾಗರಾಜ್‌, ರಾಧಾಕೃಷ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ, ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ಡಿ.ಬಿ.ವೆಂಕಟೇಶ್‌, ನಂದನವನಂ ಶ್ರೀರಾಮರೆಡ್ಡಿ, ಹುಜಗೂರು ರಾಮಣ್ಣ, ಕದಿರಿ ಯೂಸುಫ್‌, ಆದಿಲ್‌ಪಾಷ, ಜೆಡಿಎಸ್‌ ವಕ್ತಾರ ಶ್ರೀನಿವಾಸ್‌, ಪಾಪಿರೆಡ್ಡಿ, ಯೋಗಾನಂದ್‌, ನಗರಸಭಾ ಸದಸ್ಯರು ಹಾಜರಿದ್ದರು.

error: Content is protected !!