Home News ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನಡಿಪಿನಾಯಕನಹಳ್ಳಿ ಸ್ನೇಹಾ

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನಡಿಪಿನಾಯಕನಹಳ್ಳಿ ಸ್ನೇಹಾ

0

ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ನವೋದಯ ಶಾಲೆಯ ಆರನೇ ತರಗತಿಯ ವಿದ್ಯಾರ್ಥಿನಿ ಎಸ್.ಸ್ನೇಹ ಬೆಳಗಾವಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆದ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಕರಾಟೆ ವಿಭಾಗದಲ್ಲಿ ಪ್ರಥಮಳಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಎಸ್.ಸ್ನೇಹ, ೫೦ ಕೆ.ಜಿ ವಿಭಾಗದ ಕರಾಟೆಯ ಕುಮಿತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆಯುವ ರಾಷ್ಟ್ರಮಟ್ಟ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾಳೆ.
ಜಿಲ್ಲೆಯ ಇತಿಹಾಸದಲ್ಲಿಯೇ ರಾಷ್ಟ್ರಮಟ್ಟಕ್ಕೆ ಕರಾಟೆ ಸ್ಪರ್ಧೆಯಲ್ಲಿ ಆಯ್ಕೆಯಾಗಿರುವುದು ಪ್ರಥಮವಾಗಿದೆ. ಹೆಮ್ಮೆಯ ಸಂಗತಿಯಾಗಿದೆ ಎಂದು ಕರಾಟೆ ಅಸೋಸಿಯೇಷನ್ ಚೇರ್ಮನ್ ಎಂ.ಅಲ್ತಾಫ್ ಪಾಷ ತಿಳಿಸಿದ್ದಾರೆ. ಜಿಲ್ಲೆಯ ಕರಾಟೆ ಶಿಕ್ಷಕರಾದ ನಸೀರುದ್ದೀನ್, ನಶಾರಾ ಸುಲ್ತಾನ, ಎಸ್.ಮಹಮ್ಮದ್ ನೂರುಲ್ಲಾ, ಎಸ್.ಮಹಮ್ಮದ್ ಇಲಾಯತ್ತುಲ್ಲಾ, ಅಫ್ರೋಜ್ ಪಾಷ ಅಭಿನಂದಿಸಿದ್ದಾರೆ.

error: Content is protected !!