Home News ರೇಷ್ಮೆ ಹುಳುಗಳ ನಾಶ

ರೇಷ್ಮೆ ಹುಳುಗಳ ನಾಶ

0

ಭೂ ವಿವಾದದ ವಿಚಾರದಲ್ಲಿ ಪರಸ್ಪರ ದ್ವೇಷ ಬೆಳೆಸಿಕೊಂಡಿರುವ ದಾಯಾದಿಗಳು ರೇಷ್ಮೆ ಗೂಡು ಹಣ್ಣಾಗಿ ಗೂಡು ಕಟ್ಟುವ ಸಮಯದಲ್ಲಿ ಮೆಣಸಿನಕಾಯಿ ಘಾಟು ಹಾಕಿದ್ದರಿಂದ ಹುಳುಗಳು ಚಂದ್ರಿಕೆಗಳಲ್ಲಿ ಗೂಡು ಕಟ್ಟದೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ ರೈತ ಮುನಿರಾಜು ಆರೋಪಿಸಿದ್ದಾರೆ.
ತಾಲ್ಲೂಕಿನ ಮುತ್ತೂರು ಗ್ರಾಮದ ರೈತ ಮುನಿರಾಜು ಎಂಬುವವರು ಮೇಯಿಸಿದ್ದ ಸುಮಾರು ೪೦೦ ಮೊಟ್ಟೆ ರೇಷ್ಮೆಹುಳುಗಳು ಭಾನುವಾರದಂದು ಹಣ್ಣಾಗಿದ್ದು ಬೆಳಿಗ್ಗೆ ಚಂದ್ರಿಕೆಗಳಿಗೆ ಹಾಕಿದ್ದರು. ಪಕ್ಕದ ಮನೆಯಲ್ಲಿರುವ ಇವರ ದಾಯಾದಿಗಳು ಉದ್ದೇಶ ಪೂರ್ವಕವಾಗಿ ಮೆಣಸಿನಕಾಯಿ ಹುರಿದು ಘಾಟುಹಾಕಿರುವುದರ ಪರಿಣಾಮವಾಗಿ ರೇಷ್ಮೆ ಹುಳುಗಳು ಚಂದ್ರಿಕೆಗಳಲ್ಲಿ ಗೂಡು ಕಟ್ಟದೆ ಕೆಳಗೆ ಬಿದ್ದಿವೆ. ಇದರಿಂದಾಗಿ ಸುಮಾರು ೧ ಲಕ್ಷ ರೂಪಾಯಿಗೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದ್ದು ಈ ಬಗ್ಗೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ತಿಳಿಸಿದ್ದಾರೆ.

error: Content is protected !!