Home News ರೈತಕೂಟಗಳು ರೈತರು ಮತ್ತು ಬ್ಯಾಂಕ್‌ ಸಂಬಂಧ ಗಟ್ಟಿಗೊಳಿಸುತ್ತವೆ

ರೈತಕೂಟಗಳು ರೈತರು ಮತ್ತು ಬ್ಯಾಂಕ್‌ ಸಂಬಂಧ ಗಟ್ಟಿಗೊಳಿಸುತ್ತವೆ

0

ರೈತರು ಮತ್ತು ಬ್ಯಾಂಕಿನ ನಡುವಿನ ಸಂಬಂಧ ಸ್ನೇಹಮಯವಾಗಿರಬೇಕು. ಈ ಸಂಬಂಧ ಚೆನ್ನಾಗಿ ಇರಲೆಂದು ರೈತಕೂಟಗಳನ್ನು ಮಾಡಿರುವುದು ಎಂದು ನಬಾರ್ಡ್‌ ಬ್ಯಾಂಕ್‌ ಸಹಾಯಕ ಮಹಾ ಪ್ರಬಂಧಕ ಗಣೇಶ್‌ಕುಮಾರ್‌ ತಿಳಿಸಿದರು.
ತಾಲ್ಲೂಕಿನ ಬೋದಗೂರು ಗ್ರಾಮದಲ್ಲಿ ಸೋಮವಾರ ಬೋದಗೂರು ಸಿರಿ ಸಮೃದ್ಧಿ ರೈತ ಕೂಟ, ನಬಾರ್ಡ್‌ ಬ್ಯಾಂಕ್‌ ಹಾಗೂ ಕೆನರಾ ಬ್ಯಾಂಕ್‌ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಕಾಲದಲ್ಲಿ ಸಾಲ ಮರುಪಾವತಿ, ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳುವುದು, ಸಾವಯವ ಕೃಷಿ ಪದ್ಧತಿ, ಸ್ವಸಹಾಯ ಗುಂಪುಗಳು ಲೆಕ್ಕದ ಪುಸ್ತಕ ನಿರ್ವಹಣೆ ಮುಂತಾದ ವಿಚಾರಗಳ ಬಗ್ಗೆ ವಿವರವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬೋದಗೂರು ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ವಿವಿಧ ರೈತ ಕೂಟಗಳ ಸದಸ್ಯರಿಗೆ ತಲಾ ಒಂದೊಂದು ಗಿಡಗಳಂತೆ ಒಂದು ಸಾವಿರ ಗಿಡಗಳನ್ನು ವಿತರಿಸಿದರು. ಬೋದಗೂರು ಶ್ರೀ ರಾಘವೇಂದ್ರ ಮಹಿಳಾ ಸ್ವಸಹಾಯ ಸಂಘದ ಸದಸ್ಯರ ಸಿರಿ ಧಾನ್ಯಗಳು ಹಾಗೂ ಸಾವಯವ ಪದ್ಧತಿಯಿಂದ ಬೆಳೆದ ತರಕಾರಿಗಳನ್ನು ಪ್ರದರ್ಶಿಸಲಾಗಿತ್ತು.
ಸಕಾಲದಲ್ಲಿ ಬ್ಯಾಂಕಿನಲ್ಲಿ ಸಾಲ ತೀರಿಸಿದ 25 ಮಂದಿ ರೈತರಿಗೆ ಬಹುಮಾನಗಳನ್ನು ನೀಡಲಾಯಿತು. ವಿವಿಧ ಸ್ತ್ರೀ ಶಕ್ತಿ ಸಂಘಗಳಿಗೆ ಒಟ್ಟು 50 ಲಕ್ಷ ರೂಗಳವರೆಗೆ ಸಾಲವನ್ನು ನೀಡಲಾಯಿತು.
ಅಪರ ಜಿಲ್ಲಾಧಿಕಾರಿ ಅನೂರಾಧ, ಸಹಾಯಕ ಮಹಾ ಪ್ರಬಂಧಕ ಬಸವರಾಜ್‌, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಸಿ.ದೇವೇಗೌಡ, ತೋಟಗಾರಿಕೆ ಸಹಾಯಕ ನಿರ್ದೇಶಕ ಎನ್‌.ಮುನೇಗೌಡ, ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಎಚ್‌.ಜಿ.ಗೋಪಾಲಗೌಡ, ಸಿರಿ ಸಮೃದ್ಧಿ ರೈತ ಕೂಟದ ಅಧ್ಯಕ್ಷ ವೆಂಕಟಸ್ವಾಮಿರೆಡ್ಡಿ, ಕಾರ್ಯದರ್ಶಿ ಬಿ.ಎಂ.ಪ್ರಕಾಶ್‌, ಸ್ವಾಮಿ ವಿವೇಕಾನಂದ ರೈತ ಕೂಟದ ಅಧ್ಯಕ್ಷ ಬಿ.ರಾಮಾಂಜಿ, ಕೆನರಾ ಬ್ಯಾಂಕ್‌ ವ್ಯವಸ್ಥಾಪಕಿ ಸುಧಾಜ್ಯೋತಿ, ಅಧಿಕಾರಿ ಬಿ.ನೇತ್ರಾ, ಮಾಜಿ ಮಂಡಲ್‌ ಪ್ರಧಾನ್‌ ಕೆ.ಆಂಜಿನಪ್ಪ, ಬಿ.ಎನ್‌.ನಾರಾಯಣಸ್ವಾಮಿ, ದೊಡ್ಡ ಮಾರಣ್ಣ, ಬೆಳ್ಳೂಟಿ ಮಾರೇಗೌಡ, ಸುರೇಶ್‌, ಗೋಪಾಲಗೌಡ, ಮುನಿರಾಜು, ಕಾಚಹಳ್ಳಿ ರತ್ನಮ್ಮ, ರಾಮಮೂರ್ತಿ, ಮಾರೇಗೌಡ, ನಾಗರಾಜ್‌, ಆರ್‌ಐ ಮೋಹನ್‌ ಹಾಜರಿದ್ದರು.

error: Content is protected !!