Home News ರೈತರಿಗೆ ಪರಿಹಾರವನ್ನು ನೀಡಲು ಕೋರಿ ಮನವಿ

ರೈತರಿಗೆ ಪರಿಹಾರವನ್ನು ನೀಡಲು ಕೋರಿ ಮನವಿ

0

ತಾಲ್ಲೂಕಿನಲ್ಲಿ ಈಚೆಗೆ ಬಿದ್ದ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದ್ದು, ಸರ್ಕಾರದಿಂದ ರೈತರಿಗೆ ಪರಿಹಾರವನ್ನು ನೀಡುವಂತೆ ರೈತ ಮುಖಂಡರು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಅವರಿಗೆ ಬುಧವಾರ ಮನವಿಯನ್ನು ಸಲ್ಲಿಸಿದರು.
ತಾಲ್ಲೂಕಿನಾದ್ಯಂತ ಸರಿ ಸುಮಾರು 10 ರಿಂದ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆದ ಬೆಳೆಗಳು ನಾಶವಾಗಿವೆ. ಈಗಾಗಲೇ ಕಷ್ಟದಲ್ಲಿರುವ ರೈತರಿಗೆ ಕೈಗೆ ಬಂದ ಬೆಳೆ ನಾಶವಾಗಿರುವುದು ತುಂಬಲಾರದ ನಷ್ಟವನ್ನು ತಂದಿದೆ. ಮೇವುಗಳು ಕೂಡ ಕೊಳೆತು ಜಾನುವಾರುಗಳಿಗೆ ಮೇವಿಲ್ಲದಂತಾಗಿದೆ. ಹೈನುಗಾರಿಕೆ ದುಸ್ಥರವಾಗಿದೆ. ಅತಿ ಹೆಚ್ಚು ತೇವಾಂಶದಿಂದ ರೇಷ್ಮೆ ಬೆಳೆಯು ಕೂಡ ರೋಗಪೀಡಿತವಾಗಿ ಬೆಳೆಗಾರರಿಗೆ ತೊಂದರೆಯಾಗಿದೆ. ಒಟ್ಟಾರೆಯಾಗಿ, ಕೃಷಿ, ತೋಟಗಾರಿಕೆ, ಹೈನುಗಾರಿಕೆ ಮತ್ತು ರೇಷ್ಮೆಯಲ್ಲಿ ರೈತರು ಸಾಕಷ್ಟು ನಷ್ಟವನ್ನು ಅನುಭವಿಸುವಂತಾಗಿದೆ. ರೈತರ ತೊಂದರೆಗೆ ಸರ್ಕಾರವು ಸ್ಪಂದಿಸಿ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ವೇಣುಗೋಪಾಲ್, ಏಜಾಜ್ ಪಾಷ, ಖಂಡೇರಾವ್, ಮುನಿನಂಜಪ್ಪ, ದೇವರಾಜ್, ಅಂಬರೀಷ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

error: Content is protected !!